ಶನಿವಾರ, ಜನವರಿ 7, 2023

ಮೈಸೂರು ಕಥೋಲಿಕ ಧರ್ಮಕ್ಷೇತ್ರಕ್ಕೆ ಆಡಳಿತಾಧಿಕಾರಿಗಳ ನೇಮಕ

 ✝️ಮೈಸೂರು ಧರ್ಮಪ್ರಾಂತ್ಯದ  ಆಡಳಿತ ಅಧಿಕಾರಿಯಾಗಿ ಬೆಂಗಳೂರಿನ ನಿವೃತ ಮಹಾ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಬರ್ನಾಡ್ ಬ್ಲೇಸಿಯಸ್ ಮೊರಾಸ್ 

ಜನವರಿ 07, 2023 ರಂದು  ಮೈಸೂರಿನ ಧರ್ಮಾಧ್ಯಕ್ಷರಾದ ಪೂಜ್ಯ ಡಾ.  ಕೆ ಎ ವಿಲಿಯಂ ಅವರನ್ನು ವೈದ್ಯಕೀಯ ರಜೆಗೆ ಕಳುಹಿಸುವ ಆದೇಶವನ್ನು ಹೊರಡಿಸಿತು ಮತ್ತು ಬೆಂಗಳೂರಿನ ಆರ್ಚ್‌ ಡಯಾಸಿಸ್‌ನ ಮಹಾಧರ್ಮಾಧ್ಯಕ್ಷರು  ನಿವೃತ್ತ ಮಹಾಧರ್ಮಾಧ್ಯಕ್ಷರಾದ ಡಾ. ಬರ್ನಾಡ್ ಮೊರಾಸ್ ಅವರನ್ನು ಮೈಸೂರು ಡಯಾಸಿಸ್‌ನ ಅಪೋಸ್ಟೋಲಿಕ್ ಅಡ್ಮಿನಿಸ್ಟ್ರೇಟರ್ ಆಗಿ ನೇಮಿಸಿತು.

ಜನವರಿ 07, 2023 ರಂದು ಸಂಜೆ ಸಂತ ಜೋಸೆಫರ ಪ್ರಧಾನಾಲಯದಲ್ಲಿ ವಿಶೇಷ ಬಲಿಪೂಜೆ ನೆರವೇರಿತು. ನೇಮಕ ಪತ್ರವನ್ನು ಓದಲಾಯಿತು. ಮೈಸೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರಾದ ಪೂಜ್ಯ ಡಾ. ಅಂತೋನಿ ವಾಜ಼ಪಿಳ್ಳಿ, ಧರ್ಮಗುರುಗಳು, ಕನ್ಯಾಸ್ತ್ರೀಯರು, ಭಕ್ತಜನರು ಭಾಗವಹಿಸಿದ್ದರು.





ಕಾಮೆಂಟ್‌ಗಳಿಲ್ಲ:

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...