ಬುಧವಾರ, ಜೂನ್ 24, 2020

'ಶಿಕ್ಷೆಯ ಮೂಲಕ ರಕ್ಷೆಯ ಜಯ?!'



ಶಿಕ್ಷಣವಿಲ್ಲದ ಊರಿಲ್ಲ, ಶಿಕ್ಷಕರಿಲ್ಲದೆ ಶಿಕ್ಷಣವಿಲ್ಲ. ಶಿಕ್ಷೆ ಇಲ್ಲದೆ ಸರಿದಾರಿಗೆ ತರುವ ಬೇರೆ ಮಾರ್ಗವೇ ಇಲ್ಲ!?
+ ದೇವರೂ ಸಹ ಸೂಕ್ತ ಕಾರಣಗಳಿಗಾಗಿ ಭಕ್ತರನ್ನು ಶಿಕ್ಷಿಸುತ್ತಾರೆ.
+ ಹೆತ್ತವರು ಮಕ್ಕಳ ಒಳ್ಳೆಯ ಭವಿಷ್ಯದ ಮುಂದಾಲೋಚನೆಯಿಂದ ಶಿಕ್ಷಿಸುತ್ತಾರೆ.
+ ಶಿಕ್ಷಕರು ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಿಸುತ್ತಾರೆ.
+ ಹಿರಿಯರು ಕಿರಿಯರ ಒಳಿತಿಗಾಗಿ ತಮ್ಮ ಅನುಭವಗಳನ್ನು ತಾಳೆ ಹಾಕುತ್ತ ಶಿಕ್ಷಿಸುವ ಬಗ್ಗೆ ಎಚ್ಚರಿಸುತ್ತಾರೆ.
ಹೀಗೆ ಶಿಕ್ಷೆ ಎಂಬುದು ನಾಗರಿಕತೆಯ ಪರಿಧಿಯಲ್ಲಿ ಮಾತ್ರವಲ್ಲ ಮಾನವ ಅಸ್ಥಿತ್ವವು ಈ ಭೂಲೋಕದಲ್ಲಿ ಬಂದ ಗಳಿಗೆಯಿಂದಲೂ ಇದೆ. 
ಅಷ್ಟೇ ಅಲ್ಲ  ಭೂಕಂಪ, ಚಂಡಮಾರುತ, ಬಿರುಗಾಳಿ, ಜಲಪ್ರಳಯ, ಕಾಡ್ಗಿಚ್ಚು ಹೀಗೆ ಅನೇಕ ಪ್ರಕೃತಿ ವಿಕೋಪಗಳು ಧರೆಯನ್ನು ನಿರ್ನಾಮ ಮಾಡಲು ಅಲ್ಲ. ಮಾನವರನ್ನು ಎಚ್ಚರಿಸಲು ತೋರಿಸುವ ಶಿಕ್ಷೆಗಳಾಗಿವೆ.
ಅಂತೆಯೇ ಶಿಕ್ಷಿಸುವವರು ಶಿಕ್ಷೆಯನ್ನು ನೀಡುವುದು ಇತರರ ಒಳಿತಿಗಾಗಿಯೇ! 
ಶಿಕ್ಷೆಯನ್ನು ಮತ್ತೊಬ್ಬರ ಅಳಿವಿಗಾಗಿ ನೀಡಿದ್ದಾರೆ ಎಂದಾಗ ಅದು ಶಿಕ್ಷೆ ಎನಿಸಿಕೊಳ್ಳದು. ಅದು ದ್ವೇಷ ಎನಿಸಿಕೊಳ್ಳುತ್ತದೆ.
ಆದರೆ ಮೂಢರಾಗಿ ವಿನಾಶದತ್ತ ಪಯಣಿಸುತ್ತಿರುವ ಈ ನಾಗರಿಕ ಸಮಾಜದಲ್ಲಿ ಹಿಡಿತವಿಲ್ಲದೆ ಬಾಳುತ್ತಿರುವ ಮಾನವರು ಶಿಕ್ಷೆಯನ್ನು ಬೇರೆ ರೀತಿಯಲ್ಲಿ ವಿಮರ್ಶೆ ಮಾಡುತ್ತಿದ್ದಾರೆ. 
ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ವಿವಿಧ ಕಾನೂನು ಕ್ರಮಗಳನ್ನು, ರೀತಿನೀತಿಗಳನ್ನು ರೂಪಿಸಿಕೊಂಡು ತಮ್ಮದೇ ಆದಂತಹ ದಾರಿ ಹಿಡಿಯಲು ಅನುಕೂಲಕರ ವಾತಾವರಣಗಳನ್ನು ನಿರ್ಮಿಸಿಕೊಂಡಿದ್ದಾರೆ.
ಹಿಂದೆ ತಮ್ಮ ಮಕ್ಕಳ ಒಳಿತಿಗಾಗಿ ಶಿಕ್ಷೆ ನೀಡಲು, ಶಿಕ್ಷೆ ಕೊಡಿಸಲು ಹಿಂದೇಟು ಹಾಕುತ್ತಿರಲಿಲ್ಲ. ಸಮಾಜದಲ್ಲಿನ ದುಷ್ಟತನ, ದರೋಡೆ,‌ ಮೋಸ, ವಂಚನೆಗಳನ್ನು ತೊಡೆದು ಹಾಕಲು ಅಪರಾಧಗಳಿಗೆ ತಕ್ಕಂತ ಶಿಕ್ಷೆಯನ್ನು ರೂಪಿಸಲಾಗಿದೆ. ಧಾರ್ಮಿಕವಾಗಿಯೂ ಪಾಪಗಳಿಗೆ ಶಿಕ್ಷೆಗಳು ನಿಗಧಿಯಾಗಿವೆ ಎಂದು ತಿಳುವಳಿಕೆ ಬೋಧಿಸಲಾಗುತ್ತದೆ. 
ಇದರಿಂದ ಇಂದಿನ ಸಮಾಜದಲ್ಲಿ ಮಕ್ಕಳು ಮಕ್ಕಳಾಗಿ ಇರಲು, ಮಹಿಳೆಯರು ಮಹಿಳೆಯಾಗಿರಲು ಸೋಲುತ್ತಿದ್ದಾರೆ, ಗಂಡಸರುಗಳ ಮಿತಿಮೀರಿ ನಡತೆಗಳು.... ಶಿಕ್ಷೆಗಳಲ್ಲಿನ ಏರುಪೇರಿನಿಂದಲೇ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ದೊರೆಯುತ್ತವೆ.
ಆದ್ದರಿಂದ ಶಿಕ್ಷೆಗಳು ಶಿಕ್ಷಣಕ್ಕಾಗಿ, ಉತ್ತಮ ಫಲಭರಿತ ಪರಿಣಾಮಕ್ಕಾಗಿ ಎಂಬುದನ್ನು ಅರಿಯಬೇಕು.
ಈ ನಿಟ್ಟಿನಲ್ಲಿ ವೈಯಕ್ತಿಕವಾದ ವಿಚಾರಗಳನ್ನು ಪ್ರಸ್ತಾಪಿಸುವಾಗ ಅನೇಕರು ತಮ್ಮ ಬಾಳಿನಲ್ಲಿ ಸಂಭವಿಸುವ ಘಟನೆಗಳನ್ನು ಶಿಕ್ಷೆಗಳೆಂದು ಪರಿಗಣಿಸುತ್ತಾರೆ. 
ಉದಾಹರಣೆಗೆ ಬಡತನ, ಅಪಘಾತಗಳು, ಅಸಂಭವ ಸನ್ನಿವೇಶಗಳು, ಸಾಂಸರಿಕ ಎಡರುತೊಡರಗಳು, ಬದಲಿಸದಾಗದಂತಹ ಕುಂದುಕೊರತೆಗಳು, ಸಂಬಂಧಗಳನ್ನು ಕಳೆದುಕೊಳ್ಳುವುದು, ಇತರರಿಂದ ತುಳಿತಕ್ಕೊಳಗಾಗುವುದು, ಸಾಂಧರ್ಬಿಕ ಶೋಕಗಳು... ಇತ್ಯಾದಿಗಳು. 
ಇಂತಹ ನೋವಿನಲ್ಲಿ ಸಾಮಾನ್ಯವಾಗಿ ಇವುಗಳೆಲ್ಲವನ್ನೂ ದೇವರು ನೀಡಿರುವ ಶಾಪಗಳೆಂದು ದೂರುತ್ತಾರೆ. 
ಅದರೆ ಯಾವ ವಿಷಯಗಳು ನಮ್ಮನ್ನು ಉತ್ತಮತೆಯತ್ತ ಕೊಂಡೊಯ್ಯಲು ಯಾವುದೇ ರೀತಿಯಲ್ಲಿ ಅನುಕೂಲಕರವಾಗಿ‌ ಇರುವುದಿಲ್ಲವೋ ಖಂಡಿತ ಅವುಗಳು ಶಿಕ್ಷೆಗಳಲ್ಲ! 
ಬದಲಾಗಿ ನಮ್ಮ ಅಜ್ಞಾನದಿಂದಲೋ, ಅಸಡ್ಡೆಯಿಂದಲೋ, ನಿರ್ಲಕ್ಷ್ಯದಿಂದಲೋ, ಇತರರು ನಮ್ಮ ಮೇಲೆ ಹಗೆ ತೀರಿಸಿಕೊಳ್ಳುವುದರಿಂದ ಸಂಭವಿಸುವುದಾಗಿದೆ. 
ಕೆಲವೊಮ್ಮೆ ಶಿಕ್ಷೆಗಳಿಂದ‌ ಯಾವುದೇ ಒಳ್ಳೆಯ ಫಲ ಸಿಗದಿರಬಹುದು. ಅಂದ ಮಾತ್ರಕ್ಕೆ ಅದು‌ ಎಲ್ಲರಲ್ಲೂ ಒಂದೇ ವಿಧವಾಗಿ ಇರಲು ಸಾಧ್ಯವಿಲ್ಲ.
ನಮ್ಮ ಬಯಕೆಗಳಿಂದ ಉಂಟಾಗುವ ದೇವರ ವಿರುದ್ಧ ಮಾಡುವ ಅಪರಾಧಗಳಿಗೆ ಅಂತಿಮ ತೀರ್ಪಿದೆ.
ಆದ್ದರಿಂದಲೇ ಶಿಕ್ಷೆ ಎನ್ನುವುದರ ಬಗ್ಗೆ ಎಚ್ಚರಿಕೆಯಿರಬೇಕು.
- ಪಂಚೇಂದ್ರಿಯ ಬಯಕೆಗಳ ನಿಗ್ರಹ.
- ಮಾನಸಿಕ ವೈಪರೀತ್ಯಗಳ ತಡೆ.
- ಆಧ್ಯಾತ್ಮಿಕ ಕಟ್ಟಳೆ, ಅನುಕರಣೆಗಳಲ್ಲಿ ನಿಖರತೆ.
- ಲೌಕಿಕ ಮತ್ತು ಸ್ವರ್ಗೀಯ ಅಪರಾಧಗಳ ನಡುವಿನ ವ್ಯತ್ಯಾಸಗಳ ತಿಳುವಳಿಕೆ.
- ದೈವ ಪ್ರೀತಿ, ಮಾನವ ಪ್ರೀತಿಗಳ ಸ್ಪಷ್ಟವಾದ ನಿಲುವು.
- ಆಂತರಿಕ, ಬಾಹ್ಯ ಫಲಗಳ ಮೂಲ.
ಇಂತಹವುಗಳನ್ನು ಸೂಕ್ತವಾದ ದೃಷ್ಟಿಕೋನದಲ್ಲಿ ಪರಾಮರ್ಶಿಸಿ ತೀರ್ಮಾನಿಸಿಕೊಳ್ಳಬೇಕು. 
ಉತ್ತಮ ಗುರಿಯತ್ತ ಗಮನವಿಟ್ಟು ಮುಂದಡಿಯಿಡುತ್ತಿರುವವರು ಶಿಕ್ಷೆಗಳನ್ನು, ವೈಯಕ್ತಿಕ ಋಣಾತ್ಮಕ ಚಿಂತೆಗಳನ್ನು‌ ಅದಲುಬದಲು ಅನುಕರಿಸಿದೆಯಾದಲ್ಲಿ ನಿರ್ಧಿಷ್ಟವಾದ ಮುನ್ನೋಟವನ್ನು ಕಳೆದುಕೊಳ್ಳುವ ಸಂಭವವಿದೆ. 
ಏಕೆಂದರೆ ಶಿಕ್ಷೆಯಿಲ್ಲದೆ ರಕ್ಷೆಯ ತೇಜಸ್ಸು ಪ್ರಜ್ವಲಿಸದು‌ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದು ವಿಚತ್ರವಾಗಿ ಕಂಡರೂ ಸಹ ವಿಭಿನ್ನ ಅನುಭವಗಳ ಮೂಲಕ ನಮಗೆ ಸಾಬೀತಾಗುವ ಸಾಧ್ಯತೆ ಇದೆ. ಯೇಸುಪ್ರಭುವಿಗೆ ಶಿಲುಬೆಯ ಮರಣದ ಕ್ರೂರ ಶಿಕ್ಷೆ ದೊರೆತಿದ್ದರಿಂದಲೇ ಮಾನವರ ರಕ್ಷಣೆಯಾಯಿತು. ಮನುಜನ ಬದುಕು‌ ಹೊಸ ಹಾದಿಯನ್ನು ಹಿಡಿಯಿತು.
- ರಾಬರ್ಟ್ ಕವನ್ರಾಗ್, ಮೈಸೂರು -


*ನಿರಾಶೆ ನಿರ್ನಾಮಕ್ಕೆ ಮುನ್ಸೂಚನೆ*

*ನಿರಾಶೆ ನಿರ್ನಾಮಕ್ಕೆ ಮುನ್ಸೂಚನೆ*
ನೋವು, ದುಃಖ, ಸಂಕಟ, ಭಯ, ಕಳವಳ, ಕೊರಗು, ಕೀಳರಿಮೆ, ಕೋಪ, ಒಂಟಿತನ, ಅತೃಪ್ತಿ, ಉದ್ವೇಗ, ವ್ಯಥೆಗಳಂತ ನಿರಾಶೆಗೆ ಸಂಬಂಧಪಟ್ಟ ಅಸ್ವಾಭಾವಿಕ ವರ್ತನೆಗಳು ನಮ್ಮನ್ನು ನಿರ್ನಾಮದೆಡೆಗೆ ಕೊಂಡೊಯ್ಯುವ ಮಾದಕ ವಸ್ತುಗಳಿದ್ದಂತೆ.
ನಮ್ಮ ಮಾನಸಿಕ, ಆಧ್ಯಾತ್ಮಿಕ ವೈರಿಯು ಮಾನುಷ ಗುಣದವನನ್ನು ಹೆಸರಿಲ್ಲದಂತೆ ಅಳಿಸಲು, ಇವುಗಳನ್ನು ತಿಳಿಯಾದ ಮನಸ್ಸಿನ್ನೊಳಗೆ ಅಘಾತಕಾರಿ ವಿಷಜಂತುವಾಗಿ ಉಲ್ಬಣಗೊಳ್ಳಲು ಬಿಡುತ್ತಾನೆ.
ಆರಂಭದಲ್ಲಿ ಸರಾಗವಾಗಿ ಸ್ವೀಕರಿಸುವ ವ್ಯಕ್ತಿ, ತನ್ನನ್ನು ತಾನು ಕಾಪಾಡಿಕೊಳ್ಳುತ್ತೇನೆ ಎಂಬ ಪೊಳ್ಳು ಭರವಸೆಯಲ್ಲಿ ಇರುತ್ತಾನೆ. ಆದರು ಅನುಮಾನಪಡುತ್ತಲೇ ಒಳಗೊಳಗೆ ಮುದುಡುತ್ತಾನೆ.
ಕ್ರಮೇಣ ವ್ಯಾಪಿಸತೊಡಗುವಾಗ ಇಂದಲ್ಲ ನಾಳೆ ತನ್ನಿಂದ ಅದು ತೊಲಗುತ್ತದೆ ಎಂದುಕೊಂಡರೂ, ಒಳಗೊಳಗೆ ಅಳುಕುತ್ತಾನೆ.
ಮುಂದೆ ಒಂದು ದಿನ ಸಂಪೂರ್ಣವಾಗಿ ಆವರಿಸುವಾಗ ಕಳವಳ ಪಡುತ್ತಾನೆ. ಅಳು, ನಿರಾಶೆ, ಅಪನಂಬಿಕೆ, ಮರೆವು, ಶೂನ್ಯತೆ, ಸಾವಿನ ಚಿಂತೆಗಳು ಅವನಲ್ಲಿ ಅಸ್ತಿತ್ವವನ್ನು ಪಡೆಯತೊಡಗುತ್ತವೆ.
ಇದರಿಂದ ಅನೇಕರು ತಮ್ಮನ್ನೆ ತಾವು ಕಳೆದುಕೊಂಡು ಪ್ರಾಪಂಚಿಕತೆಯನ್ನು ಮರೆಯಬಹುದು. ಅನೇಕ ಪ್ರತಿಭಾನ್ವಿತರು ಆಸಕ್ತಿ ಕಳೆದುಕೊಂಡು ಮೌನಿ ಆಗಬಹುದು. ಇನ್ನೂ ಅನೇಕರು ತಮ್ಮನ್ನೇ ಈ ಲೋಕದಿಂದ ಬೇರ್ಪಡಿಸಿಕೊಳ್ಳಲು ತವಕಿಸಿ ಸೋಲಬಹುದು ಅಥವಾ ಇಲ್ಲವಾಗಿಸಿಕೊಳ್ಳಬಹುದು.
ಇವುಗಳಿಗೆಲ್ಲ ಕಾರಣ ವೈರಿ ಬೀಸುವ ಋಣಾತ್ಮಕ ಬಲೆಯೊಳಗೆ ಅರಿವಿಲ್ಲದೆ ತಮ್ಮನ್ನೇ ಬಲಿಯಾಗಿಸಿಕೊಳ್ಳುವುದು!
ಪುಣ್ಯ ಪುರುಷರು, ಸಾಧಕರು, ಮೇಧಾವಿಗಳು, ಬುದ್ದಿವಂತ ಸುಗುಣರುಗಳಂತಹ ಯಾರನ್ನೂ ಇವು ಬಿಟ್ಟಿಲ್ಲ. ಅಷ್ಟೇ ಏಕೆ ನಮ್ಮ ಪ್ರಭುವನ್ನು ಸಹ ಕಾಡಿಸಿತು.
ಇವುಗಳನ್ನು ಜಯಿಸಿದರೆ ಮಾತ್ರವೇ ಯಶಸ್ಸು, ನೆಮ್ಮದಿ ನಮಗೆ ಕಟ್ಟಿಟ್ಟ ಬುತ್ತಿ.
ಆದ್ದರಿಂದ ಕಣ್ಣು ಮಂಜಾಗುವುದರ ಮುನ್ನ, ಕಿವಿ ಮಂದವಾಗುವ ಮುನ್ನ, ಶರೀರ ಚೈತನ್ಯಹೀನವಾಗುವುದರ ಮುನ್ನ, ಜ್ಞಾನ ಕದಡಿ ಹೋಗುವ ಮುನ್ನ, ಅಭಿಮಾನ ಕಳೆದೋಗುವ ಮುನ್ನ, ನಮ್ಮೊಳಗಿನ ದೃಢತೆ ಕುಂದಿ ಹೋಗುವ ಮುನ್ನ ಕೆಲ ನಿಮಿಷಗಳನ್ನಾದರೂ ನಮ್ಮನ್ನು ನಾವು ಪ್ರಸ್ತುತದಲ್ಲಿ ಅವಲೋಕಿಸಬೇಕು.
ಇಲ್ಲದಿದ್ದರೆ ನಿರಾಶೆ ನಮ್ಮನ್ನು ಬಂಧಿಸಿ ನಿರ್ನಾಮಗೊಳಿಸಬಹುದು! ವೈದ್ಯಕೀಯದಲ್ಲಿ ಆಂತರ್ಯದ ಬೆಂಬಲವನ್ನು ಪ್ರಥಮವಾಗಿ ಪರೀಕ್ಷಿಸುತ್ತಾರೆ.
ಅದು ಇದ್ದರೆ ರೋಗಿಯ ಅರ್ಧ ಕಾಯಿಲೆ ಗುಣವಾದಂತೆಯೇ ಸರಿ. ಇದಕ್ಕಾಗಿಯೇ ರೋಗಿ ಸ್ಪಂದಿಸುತ್ತಿದ್ದಾನೆ ಎಂದು ಹೇಳುವುದು.
ಹಾಗೆಯೆ ನಮ್ಮ ಮೇಲೆ ನಕರಾತ್ಮಕ ತಲ್ಲಣಗಳು ಕಾಣಿಸಿಕೊಳ್ಳುತ್ತಿವೆ ಎಂಬ ಅರಿವು ಮೂಡುವಾಗಲೇ ಎಚ್ಚರವಹಿಸಬೇಕು. ಕೆಲವೊಮ್ಮೆ ನಮಗರಿವಿಲ್ಲದಿದ್ದರು ಇತರರು ಗುರುತಿಸಿರುತ್ತಾರೆ. ಅವರು ಪ್ರಸ್ತಾಪ ಮಾಡಿಯೇ ಮಾಡುತ್ತಾರೆ. ಅದನ್ನು ಉದಾಸೀನ ಮಾಡದೆ ಅದರಿಂದ ಬಿಡಿಸಿಕೊಳ್ಳುವ ಮಾರ್ಗ ಹುಡುಕಬೇಕು.
ಹೆದರಬೇಕಾದ ಪ್ರಸಂಗವಿಲ್ಲ. ಎಲ್ಲಾ ಸಂಕಷ್ಟಗಳಿಗೂ ಪರಿಹಾರ ಇದ್ದೇಇದೆ. ಇದು ಪ್ರಕೃತಿ ನಿಯಮ.
ಎಲ್ಲರಿಗೂ ಒಬ್ಬರು ಸಂಗಾತಿ ಇದ್ದೇ ಇರುತ್ತಾರೆ. ಇದು ದೇವರ ನಿಯಮ.
ದೈವಿಕತೆ ಎಂಬುದು ಅಗೋಚರ ಶಕ್ತಿ. ವಿಶ್ವಾಸ ಇರಬೇಕು. ಯಾವುದೇ ಕಾರಣಕ್ಕೂ ನಿರಾಶೆಗೆ ಒಳಗಾಗಬಾರದು.
ಸ್ವಾಭಿಮಾನ, ಅಹಂ, ತಮಗೆ ಕುಂದು ಬರಬಹುದೆಂಬ ಚಿಂತೆ, ಹಠ, ಅತಿಯಾದ ಕರ್ತವ್ಯ ಪ್ರಜ್ಞೆಗಳಂತವುಗಳನ್ನು ತೊರೆದು ನಮ್ಮನ್ನು ನಾವು ಉಳಿಸಿಕೊಳ್ಳಲು ಅಗೋಚರ ದೇವಬಲದಲ್ಲಿ, ನಮ್ಮೊಳಗಿನ ಅಂತರಾಳದ ಸಹವಾಸದಲ್ಲಿ ವಿಶ್ವಾಸವಿಡಬೇಕು. ಮುಖ್ಯವಾಗಿ, ನಮಗೆ ದೊರಕುವ ಸಮಯವನ್ನು ಶೂನ್ಯತೆಯಲ್ಲಿ ಹರಿದಾಡಲು ಬಿಡಬಾರದು!! ಏಕೆಂದರೆ ನಾವಿದ್ದರೇನೆ ಈ ಪ್ರಪಂಚ!!!

- ರಾಬರ್ಟ್ ಕವನ್ರಾಗ್ - 

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...