ಗುರುವಾರ, ಆಗಸ್ಟ್ 3, 2023

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ! 

ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ... 

ಕೆಲವೊಮ್ಮೆ ಒಬ್ಬ ವ್ಯಕ್ತಿ ಸತ್ತ ಮೇಲೆ ಮನೆಯವರು ವಿವಿಧ ಕಾರಣಗಳಿಂದ ಅಂಗಾಂಗ ದಾನಗಳಿಗೆ ಒಪ್ಪಿಕೊಳ್ಳುತ್ತಾರೆ.  

ಸತ್ತ ವ್ಯಕ್ತಿ ತಾನು ಇರುವಾಗ ಒಪ್ಪಿದ್ದನೋ? ಇಲ್ಲವೋ? ಗೊತ್ತಿಲ್ಲ. ಆದರೂ ಅಂತವರನ್ನು ಟ್ರೋಲ್ ಮಾಡಿ ವೀರಾಧಿವೀರನೆಂದು ಹಾಡಿ ಹೊಗಳಿ ಕೊಂಡಾಡುತ್ತಾರೆ. 

ಆದರೆ 'ಅಂಗಾಂಗ ದಾನ' ದ ಬಗ್ಗೆ ತಮಗಿಷ್ಟ ಬಂದಂತೆ ಮಾಧ್ಯಮಗಳಲ್ಲಿ ಪ್ರಚಾರಪಡಿಸುವವರಲ್ಲಿ ಎಷ್ಟು ಜನ ತಾವು ಕೊನೆಯ ಪಕ್ಷ 'ನೇತ್ರದಾನ' ಮಾಡಿರಬಹುದು?????

ಈತನ್ಮದ್ಯೆ, ಎಷ್ಟೋ ವ್ಯಕ್ತಿಗಳು ತಾವು ಜೀವಂತವಿರುವಾಗಲೇ ಅಂಗಾಂಗ ದಾನಕ್ಕಾಗಿ ಸಮ್ಮತಿ ಪತ್ರವನ್ನು ಬರೆದುಕೊಟ್ಟಿರುತ್ತಾರೆ. ಆದರೆ ಈ ವಿಷಯವನ್ನು ಮುಕ್ತವಾಗಿ ತಿಳಿಸಲು ಹಿಂಜರಿದಿರುತ್ತಾರೆ. ತಮ್ಮ ಕುಟುಂಬ, ಬಂಧುಮಿತ್ರರ ನಡುವೆಯೇ ಹಂಚಿಕೊಳ್ಳದ ಎಷ್ಟೋ 

'ಮಹಾನ್ ಅಂಗಾಂಗ ದಾನಶೂರ ಶ್ರೇಷ್ಟ' ರು ನಮ್ಮ ನಡುವೆಯೇ ಇದ್ದಾರೆ. ಅಂತಹವರು ನೀವಾಗಿರಬಹುದಲ್ಲವೇ????









ವಿಷಾಧವೆಂದರೆ, ಒಂದು ವೇಳೆ ಇಂತಹ ವ್ಯಕ್ತಿಗಳ ಬಗ್ಗೆ ತಿಳಿದಿದ್ದರು ಯಾವೊಬ್ಬರೂ ಕೂಡ ಆತನ ಮೇಲೆ ಒಂದಿಷ್ಟು ಕೃತಜ್ಞತಾ ಭಾವವಿರಲಿ ಒಂದು ಒಳ್ಳೆಯ ಮಾತನ್ನು ಹೇಳಿರುವುದಿಲ್ಲ! 

ಆದ್ರೆ, ಸತ್ತ ಮೇಲೆ ಇಷ್ಟವಿತ್ತೋ ಇಲ್ಲವೋ? ಆತನನ್ನು ಮಹಾತ್ಮನ ಸ್ಥಾನದಲ್ಲಿ ಕೂರಿಸುತ್ತಾರೆ. ತಪ್ಪೇನಿಲ್ಲ!!

'ಬದುಕಿದ್ದಾಗಲೇ ಅಂಗಾಂಗಗಳು, ನೇತ್ರ ದಾನ ಮಾಡಲು ಬರೆದುಕೊಟ್ಟವರನ್ನು ಗುರುತಿಸಿ ಅಂತವರಿಗೆ  ಗೌರವಿಸಿ' 

ಅಂತವರ ಕಷ್ಟ ಸುಖವನ್ನು ವಿಚಾರಿಸಿ ಕಿಂಚಿತ್ತಾದರೂ ಇವರಿಗೆ ಕಷ್ಟದ ಸಮಯಗಳಲ್ಲಿ ಸಹಕಾರ, ಸಾಂತ್ವನ, ಹಿತವಾದ ಮಾತುಗಳನ್ನು ಹೇಳೋಣ ಎಂಬುದೇ ನನ್ನೀ ಬರಹದ ಮೂಲಕ ನನ್ನ ಕೋರಿಕೆ! 

'ದಾನ ಪತ್ರ' ಬರೆದುಕೊಟ್ಟವರಿಗೆ ನಿಮಗೆ ತಲೆಬಾಗಿ ನಮಸ್ಕರಿಸುತ್ತಾ ಹೃದಯಂತರಾಳದಿಂದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. 

ದಯವಿಟ್ಟು ತಮಗೆ ಇಚ್ಚಿಸಿದರೆ ಹೇಳಿಕೊಳ್ಳಿರಿ. *ಅಂಗಾಂಗ ದಾನ ಮಾಡಲು ಮನಸ್ಸು ಮಾಡೋಣ. ಬದುಕುವವರಿಗೆ ಬದುಕಾಗಿರೋಣ* ಧನ್ಯವಾದಗಳು.

: ರಾಬರ್ಟ್ ಇ. ಕವನ್ರಾಗ್, ಮೈಸೂರು

  9448942998

  robertekavanrag@gmail.com

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...