ಸೋಮವಾರ, ಆಗಸ್ಟ್ 24, 2020

 'ನಮ್ಮನ್ನೇ ನಾವು ಮಾರಿಕೊಳ್ಳುವ ಅಧೋಗತಿ!'


ಅನ್ನದಾನ, ವಿದ್ಯಾದಾನ, ಸ್ವತ್ತಿನ ದಾನಗಳೆಲ್ಲವೂ ಸಾಧಾರಣವಾಗಿ ಒಬ್ಬ ವ್ಯಕ್ತಿ ಜೀವಂತ ಇರುವಾಗ ಮಾಡುವುದಾಗಿದೆ.

ನೇತ್ರದಾನ,‌ ಕಿಡ್ನಿ ದಾನ, ಅಂಗಾಂಗ ದಾನಗಳು ಸ್ವ ಇಚ್ಛೆಯಿಂದ ತಮ್ಮನ್ನೇ ಅರ್ಪಿಸಿಕೊಳ್ಳುವುದಾಗಿದೆ.
ಇದು ಒಬ್ಬ ವ್ಯಕ್ತಿಯ ಮರಣದ ನಂತರದ್ದಾಗಿದೆ.

ಇವೆರಡರ ಕಾಲ ಅದಲು ಬದಲಾದರೆ ಏನೋ ವಿಫಲತೆ ಸಂಭವಿಸಿದೆ ಎಂಬುದು ಖಚಿತ.
ಜೀವಂತವಾಗಿ ಇರುವಾಗಲೇ ಪ್ರಾಣ ಸ್ನೇಹಿತನಿಗಾಗಿಯೊ, ಒಡಹುಟ್ಟಿದವರಿಗಾಗಿಯೊ, ಸಂಗಾತಿ ಹೆತ್ತವರಿಗಾಗಿಯೊ ತಮ್ಮ ಕಿಡ್ನಿಯನ್ನು ದಾನ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ.
ಸಾಯುವ ಕೊನೆಯ ಗಳಿಗೆಯಲ್ಲಿ ತಮ್ಮನ್ನೇ ದಾನವಾಗಿ ಕೊಟ್ಟ ಉದಾಹರಣೆಗಳೂ ಇವೆ.
ಆದರೆ ಜೀವನದಲ್ಲಿ ಸೋತಿದ್ದೇವೆ, ಬದುಕುವ ದಾರಿ ಕಾಣುತ್ತಿಲ್ಲ, ಒಂಟಿತನ ಕಾಡಿಸುತ್ತಿದೆ .... ಇಂತಹ ಕಾರಣಗಳಿಂದ ಅನೇಕರು ಅಂಗದಾನಕ್ಕೆ ಸಿದ್ಧರಾಗಿಬಿಡುತ್ತಾರೆ.
ಹಣದ ಸಂಕಷ್ಟದಿಂದ ಸಾಲವನ್ನು ತೀರಿಸಲು ಸಾಧ್ಯವಾಗದೆ ನರಳುತ್ತಿರುವವರಲ್ಲಿ‌ಅನೇಕರು ಇಂತಹ ಕೃತ್ಯಕ್ಕಿಳಿಯಿತ್ತಾರೆ.

ಇದು ಸೂಕ್ತವೇ? ಎಂದು ಯೋಚಿಸುವುದಕ್ಕಿಂತಲೂ ಇವೆಲ್ಲವೂ ಅಜ್ಞಾನದ, ಅತಿರೇಕದ ಬುದ್ಧಿಹೀನ ಕೆಲಸವಾಗಿದೆ ಎಂಬುವುದರಲ್ಲಿ‌ ಎರಡು ಮಾತಿಲ್ಲ.

ಇಂತಹವರು,
@ ತಮ್ಮನ್ನು ತಾವು ಮೊದಲು ಗೌರವಿಸಿ, ಪ್ರೀತಿಸಿಕೊಳ್ಳಬೇಕು. ಏಕೆಂದರೆ ಅಂಗಾಂಗಗಳನ್ನು ಕಳೆದುಕೊಂಡರೆ ಮತ್ತೆ ಪಡೆಯಲು ಅಸಾಧ್ಯ.
@ ಎಲ್ಲಾ ಸಮಸ್ಯೆಗಳಿಗೂ ಪರಿಹಾರ, ಕಷ್ಟಕ್ಕೆ ಅಂತ್ಯವಿದೆ ಎಂಬ ವಿಶ್ವಾಸವಿರಬೇಕು.
@ ಈ ಜಗತ್ತಿನಲ್ಲಿ ಯಾರೂ ಒಂಟಿಯಲ್ಲ.
@ ತಮಗಿಂತಲೂ ತೊಂದರೆ, ಕಷ್ಟದಲ್ಲಿರುವವರನ್ನು ಅದರಲ್ಲೂ ಆಸ್ಪತ್ರೆ, ಅನಾಥಾಶ್ರಮ, ಅಂಗಹೀನತೆ, ಬುದ್ಧಿಮಾಂದ್ಯತೆಯವರನ್ನು ಭೇಟಿಯಾಗಬೇಕು.
@ ತಮ್ಮಲ್ಲಿರುವ ಧನಾತ್ಮಕತೆಗಳನ್ನು ಗುರುತಿಸಿಕೊಂಡು ಅವುಗಳನ್ನು ಅಭಿವೃದ್ಧಿಪಡಿಸಿಕೊಂಡು ಚಿಂತೆಗಳಿಗೆ ಮುಕ್ತಾಯ ಹಾಡುವುದು.
@ ಪ್ರೀತಿ, ಕ್ಷಮೆ, ಸೇವೆಗಳಂತ ಅಂತರಿಕ ತೃಪ್ತಿಗೆ, ಸಮಾಜಮುಖಿ ಕಾರ್ಯಗಳಲ್ಲಿ ಸಮಯ ಕಳೆಯುವುದು.
@ ಆಧ್ಯಾತ್ಮಿಕತೆಯ, ‌ಸಾಧನೆಯ ಹಾದಿಯಲ್ಲಿ ನಡೆಯುವುದು.
ಇಂತಹ ಒಳ್ಳೆಯ ವಿಷಯಗಳತ್ತ ತಮ್ಮನ್ನು ತಾವು ಕಂಡುಕೊಂಡರೆ, ಇಲ್ಲಸಲ್ಲದ ಯೋಚನೆಗಳು ಮಾಯವಾಗಿ ಮನಸ್ಸು ನಿರ್ಮಲಗೊಂಡು ಬದುಕಿಗೆ ಅರ್ಥ ದೊರಕುತ್ತದೆ.
ಹುಟ್ಟಿದವರು ಒಂದು ದಿನ ಉಸಿರನ್ನು ತ್ಯಜಿಸಲೇಬೇಕು, ಆದರೆ ತಮ್ಮನ್ನು ತಾವೇ ಸಂಪೂರ್ಣ ಶೂನ್ಯ ಎಂದುಕೊಳ್ಳಬಾರದು. ಏಕೆಂದರೆ ದೇವರ ಪ್ರೀತಿಯ, ದೇವರ ರೂಪದ ಮಾನವರಿಗಾಗಿಯೇ ಸಮಸ್ತ ಸೃಷ್ಟಿಯೂ ಉಂಟು ಮಾಡಲ್ಪಟ್ಟಿತು. ಯಾವ ಕಾರಣಕ್ಕೂ ನಮ್ಮನ್ನು ನಾವು ಮಾರಿಕೊಳ್ಳುವುದು ಸಲ್ಲದು. ಏಕೆಂದರೆ
ಮಾನವನಿಗೆ ತನ್ನನ್ನು ತಾನು ಮಾರಿಕೊಳ್ಳುವ ಅಥವಾ ಅಂತ್ಯಗೊಳಿಸಿಕೊಳ್ಳುವ ಯಾವುದೇ ಹಕ್ಕಿಲ್ಲ.


: ರಾಬರ್ಟ್ ಕವನ್ರಾಗ್, ಮೈಸೂರು :

ಸೋಮವಾರ, ಆಗಸ್ಟ್ 10, 2020

ಸಾಮಾಜಿಕ ಅಂತರ

 

ಆಂತರ್ಯ + ಮನಸ್ಸು

 ಆಂತರ್ಯ + ಮನಸ್ಸುಗಳು ಮೌನ ತಾಳಿದಾಗ!

ಬೆಳಕು ಎಲ್ಲಕ್ಕಿಂತಲೂ ವೇಗವಾಗಿ ಚಲಿಸುತ್ತದೆ. ಆದ್ದರಿಂದಲೇ ಮಿಂಚಿನ ನಂತರದಲಿ ಗುಡುಗು ಕೇಳಿಸುವುದು. ಬೆಳಕಿಗಿಂತಲೂ ವೇಗದಲ್ಲಿ ತಲುಪುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಅದು ಪ್ರಪಂಚದ ಯಾವ ಮೂಲೆಗಾದರೂ ಏನೂ ಬ್ರಹ್ಮಾಂಡವನ್ನೇ ಸುತ್ತಿಬರುತ್ತದೆ. ಅದು ಯಾರ, ಯಾವುದೇ ಹಿಡಿತಕ್ಕೂ ಸಿಗದಂತಹ ಮಹಾ ಪ್ರಚಂಡ. ವೈಶಿಷ್ಟ್ಯವೆಂದರೆ ಅದು ಯಾರಲ್ಲಿದೆಯೊ ಆ ವ್ಯಕ್ತಿಯ ಅಪ್ಪುಗೆಯಲ್ಲಿ ಮಾತ್ರ ತನ್ನನ್ನು ತಗ್ಗಿಸಿಕೊಳ್ಳಬಲ್ಲದು. ಅದು ಅ ವ್ಯಕ್ತಿಯ ವ್ಯಕ್ತಿತ್ವದ ಭಾವಂತರಂಗ ಸ್ಪರ್ಶದ ಪರಿಮಿತಿಯಲ್ಲಿ ಮಾತ್ರವೇ ಸಾಧ್ಯ. ಆ ಮನಸ್ಸು ಅಥವಾ ಚಿತ್ತವೇ ಅಂತರಾಳದ ಸ್ನೇಹಿತ. ಈ ಗೆಳೆಯರಿಬ್ಬರೂ ಪ್ರತಿ ಹೃದಯದ ತುಡಿತಗಳನ್ನೂ ಬಲ್ಲವರಾಗಿದ್ದು ಸದಾ ಮಾತನಾಡಿಕೊಂಡು ಅದರ ಸುಸ್ಥಿಗೆ ಯೋಜನೆಗಳನ್ನು ರೂಪಿಸುತ್ತಾರೆ.
ಒಬ್ಬ ವ್ಯಕ್ತಿಯ ಜ್ಞಾನ, ನಡತೆ, ಗುಣ, ರೂಪ, ಸ್ಥಿತಿಗತಿ, ಸಾಧನೆಗಳೆಲ್ಲವೂ ಇವುಗಳಲ್ಲಿ ಕೇಂದ್ರಿಕೃತವಾಗಿದೆ. ಅವುಗಳು ತಮ್ಮ ಮಾತನ್ನು ಅರೆಕ್ಷಣ ತಡೆಹಿಡಿದರೂ ಇಡೀ ವ್ಯಕ್ತಿ ವ್ಯಕ್ತಿತ್ವ ವಿರೂಪಗೊಳ್ಳುತ್ತದೆ.
ಮುಂದಿನ ದೃಷ್ಟಿಕೋನ, ಮುಂದಿನ ಯೋಜನೆಗಳು,‌ ಮುಂದಿನ ಬದುಕು ಇದ್ದಕ್ಕಿದ್ದ ಹಾಗೆ ತಿರುವನ್ನು ತೆಗೆದುಕೊಳ್ಳುತ್ತವೆ.
ಇದರಿಂದಲೆ ಸಾಧನೆಗಳತ್ತ ಪಯಣಿಸುವ ಭರವಸೆಯ ಬಲಗಳು, ಸಾಕ್ಷಾತ್ಕಾರದತ್ತ ಧಾವಿಸುವ ಸಾತ್ವಿಕ ನಿಲುವುಗಳು ತಮ್ಮತನವನ್ನು ಜಾರಿಸಿಬಿಟ್ಟು ಹೊಸ ಮಾರ್ಗದಲ್ಲಿ ಮುಂದುವರೆಯುತ್ತವೆ. ಇದರಿಂದ ಒಳಿತನ್ನು ಕಾಣಬಹುದು, ಅಳಿವನ್ನು ನಿರೀಕ್ಷಿಸಬಹುದು.
ಉತ್ತಮವಾದ ಹೊಸ ಪರಿಚಯವಿದ್ದರೆ ಯಾವ ತೊಂದರೆಗಳು ಇರದು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಭೀತಿಯನ್ನು ಉಂಟು ಮಾಡಬಲ್ಲ ತಾಪಕ್ಕೆ ದಾರಿಯಾದರೆ ಅನಾಹುತ ಸಂಭವಿಸುವುದು.
ತಿಳಿ ಹೇಳುವವರ ಒಂದು ದೃಢವಾದ ಮಾತು, ದಾರಿದೀಪದಂತಿರುವ ಒಂದೇ ಒಂದು ಕಿಡಿ ಅದು ಧಾರ್ಮಿಕವಾಗಿರಲಿ, ಸಾಮಾಜಿಕವಾಗಿರಲಿ ಮುಂಬರುವ ಅನುಭವಗಳನ್ನೇ ಆತಂಕಕಾರಿಯಾಗಿ ಪರಿಣಮಿಸಲು ಕಾರಣವಾಗುತ್ತವೆ.
ಆದ್ದರಿಂದ
- ವಿದ್ಯೆಗೆ ನದಿಯಾಗಿರುವ ಶಿಕ್ಷಕರು,
- ಜ್ಞಾನಕ್ಕೆ ಪೂರಣವಾಗಿರುವ ಮೇಧಾವಿಗಳು,
- ಧಾರ್ಮಿಕತೆಯ ಮೂಲಕ ಆತ್ಮ ಬೆಳವಣಿಗೆಗೆ ಆದರ್ಶ ಪ್ರಾಯರಾದವರು,
- ಸಾಧನೆಗಳ ಹಾದಿಯ ಸ್ಪೂರ್ತಿದಾಯಕರುಗಳ.......
* ಮನ-ಮನದಾಳದ ಮಾತಿನಲ್ಲಿ ನಿಖರವಾದ ಪದಗಳಿರಬೇಕು.
* ಸತ್ಯತೆಯ ಸಿಂಚನಗಳಾಗಿರಬೇಕು,
* ಸದ್ಗುಣಗಳನ್ನು ಶೃಂಗರಿಸಿಕೊಂಡ ರೂಪವಂತರಾಗಿರಬೇಕು.
* ಜ್ಞಾನದ ಕೊರತೆಗಳಿದ್ದರೂ ಸಾಮಾಜಿಕ ಧನಾತ್ಮಕ ಚಿಂತನೆಗಳ ಸುಗಂಧ ಸೂಸುವವರಾಗಿರಬೇಕು.
* ವಿದ್ಯಾವಂತರಲ್ಲದಿದ್ದರೂ ವಿಷಯಗಳ ಸಮರ್ಪಕ ಜಲಧಾರೆಯಾಗಿರಬೇಕು.
* ಸ್ವಾರ್ಥ, ಅಹಂಗಳಂತಹ ಅಲ್ಪತನಗಳ ಎದುರಾಳಿಯಾಗಿರಬೇಕು.
ಪ್ರಾಮಾಣಿಕತೆ, ಪರಿಶುದ್ದತೆ, ಪರಿಪೂರ್ಣತೆಗಳನ್ನು ಪಾಲಿಸಲು ಪ್ರಯತ್ನಿಸುತ್ತಾ ಪಾವನತೆಯನ್ನು ಪಡೆದುಕೊಂಡವರಾಗಿರಬೇಕು.
ಅಂತಿಮವಾಗಿ ತಾವು ತಮಗಾಗಿ ಅಲ್ಲ ತಮ್ಮಲ್ಲಿ ಭರವಸೆಯನ್ನಿಟ್ಟು ಬರುವವರ ಸೇವೆಯನ್ನು ಮಾಡುವವರು ಎಂಬ ಮನೋಭಾವದ ಮನುಷ್ಯರಾಗಿರಬೇಕು.


- ರಾಬರ್ಟ್ ಕವನ್ರಾಗ್, ಮೈಸೂರು

*ನಿರಾಶೆ ನಿರ್ನಾಮಕ್ಕೆ ಮುನ್ಸೂಚನೆ*

 *ನಿರಾಶೆ ನಿರ್ನಾಮಕ್ಕೆ ಮುನ್ಸೂಚನೆ*


ನೋವು, ದುಃಖ, ಸಂಕಟ, ಭಯ, ಕಳವಳ, ಕೊರಗು, ಕೀಳರಿಮೆ, ಕೋಪ, ಒಂಟಿತನ, ಅತೃಪ್ತಿ, ಉದ್ವೇಗ, ವ್ಯಥೆಗಳಂತ ನಿರಾಶೆಗೆ ಸಂಬಂಧಪಟ್ಟ ಅಸ್ವಾಭಾವಿಕ ವರ್ತನೆಗಳು ನಮ್ಮನ್ನು ನಿರ್ನಾಮದೆಡೆಗೆ ಕೊಂಡೊಯ್ಯುವ ಮಾದಕ ವಸ್ತುಗಳಿದ್ದಂತೆ.
ನಮ್ಮ ಮಾನಸಿಕ, ಆಧ್ಯಾತ್ಮಿಕ ವೈರಿ ಮಾನುಷ ಗುಣದವನನ್ನು ಹೆಸರಿಲ್ಲದಂತೆ ಅಳಿಸಲು, ಇವುಗಳನ್ನು ತಿಳಿಯಾದ ಮನಸ್ಸಿನ್ನೊಳಗೆ ಅಘಾತಕಾರಿ ವಿಷಜಂತುವಾಗಿ ಉಲ್ಬಣಗೊಳ್ಳಲು ಬಿಡುತ್ತಾನೆ.
ಆರಂಭದಲ್ಲಿ ಸರಾಗವಾಗಿ ಸ್ವೀಕರಿಸುವ ವ್ಯಕ್ತಿ, ತನ್ನನ್ನು ತಾನು ಕಾಪಾಡಿಕೊಳ್ಳುತ್ತೇನೆ ಎಂಬ ಪೊಳ್ಳು ಭರವಸೆಯಲ್ಲಿ ಇರುತ್ತಾನೆ. ಆದರು ಅನುಮಾನಪಡುತ್ತಲೇ ಒಳಗೊಳಗೆ ಮುದುಡುತ್ತಾನೆ.
ಕ್ರಮೇಣ ವ್ಯಾಪಿಸತೊಡಗುವಾಗ ಇಂದಲ್ಲ ನಾಳೆ ತನ್ನಿಂದ ಅದು ತೊಲಗುತ್ತದೆ ಎಂದುಕೊಂಡರೂ, ಒಳಗೊಳಗೆ ಅಳುಕುತ್ತಾನೆ. ಮುಂದೆ ಒಂದು ದಿನ ಸಂಪೂರ್ಣವಾಗಿ ಆವರಿಸುವಾಗ ಕಳವಳ ಪಡುತ್ತಾನೆ.
ಅಳು, ನಿರಾಶೆ, ಅಪನಂಬಿಕೆ, ಮರೆವು, ಶೂನ್ಯತೆ, ಸಾವಿನ ಚಿಂತೆಗಳು ಅವನಲ್ಲಿ ಅಸ್ತಿತ್ವವನ್ನು ಪಡೆಯತೊಡಗುತ್ತವೆ.
* ಇದರಿಂದ ಅನೇಕರು ತಮ್ಮನ್ನೆ ತಾವು ಕಳೆದುಕೊಂಡು ಪ್ರಾಪಂಚಿಕತೆಯನ್ನು ಮರೆಯಬಹುದು.
* ಅನೇಕ ಪ್ರತಿಭಾನ್ವಿತರು ಆಸಕ್ತಿ ಕಳೆದುಕೊಂಡು ಮೌನಿ ಆಗಬಹುದು.
* ಇನ್ನೂ ಅನೇಕರು ತಮ್ಮನ್ನೇ ಈ ಲೋಕದಿಂದ ಬೇರ್ಪಡಿಸಿಕೊಳ್ಳಲು ತವಕಿಸಿ ಸೋಲಬಹುದು ಅಥವಾ ಇಲ್ಲವಾಗಿಸಿಕೊಳ್ಳಬಹುದು.
ಇವುಗಳಿಗೆಲ್ಲ ಕಾರಣ ವೈರಿ ಬೀಸುವ ಋಣಾತ್ಮಕ ಬಲೆಯೊಳಗೆ ಅರಿವಿಲ್ಲದೆ ತಮ್ಮನ್ನೇ ಬಲಿಯಾಗಿಸಿಕೊಳ್ಳುವುದು!
ಪುಣ್ಯ ಪುರುಷರು, ಸಾಧಕರು, ಮೇಧಾವಿಗಳು, ಬುದ್ದಿವಂತ ಸುಗುಣರುಗಳಂತಹ ಯಾರನ್ನೂ ಇವು ಬಿಟ್ಟಿಲ್ಲ. ಇವುಗಳನ್ನು ಜಯಿಸಿದರೆ ಮಾತ್ರವೇ ಯಶಸ್ಸು, ನೆಮ್ಮದಿ ನಮಗೆ ಕಟ್ಟಿಟ್ಟ ಬುತ್ತಿ.
ಆದ್ದರಿಂದ ಕಣ್ಣು ಮಂಜಾಗುವುದರ ಮುನ್ನ,
ಕಿವಿ ಮಂದವಾಗುವ ಮುನ್ನ,
ಶರೀರ ಚೈತನ್ಯಹೀನವಾಗುವುದರ ಮುನ್ನ,
ಜ್ಞಾನ ಕದಡಿ ಹೋಗುವ ಮುನ್ನ, ಅಭಿಮಾನ ಕಳೆದೋಗುವ ಮುನ್ನ ನಮ್ಮೊಳಗಿನ ದೃಢತೆ ಕುಂದಿ ಹೋಗುವ ಮುನ್ನ ಕೆಲ ನಿಮಿಷಗಳನ್ನಾದರೂ ನಮ್ಮನ್ನು ನಾವು ಪ್ರಸ್ತುತದಲ್ಲಿ ಅವಲೋಕಿಸಬೇಕು.
ಇಲ್ಲದಿದ್ದರೆ ನಿರಾಶೆ ನಮ್ಮನ್ನು ಬಂಧಿಸಿ ನಿರ್ನಾಮಗೊಳಿಸಬಹುದು!
ವೈದ್ಯಕೀಯದಲ್ಲಿ ಆಂತರ್ಯದ ಬೆಂಬಲವನ್ನು ಪ್ರಥಮವಾಗಿ ಪರೀಕ್ಷಿಸುತ್ತಾರೆ. ಅದು ಇದ್ದರೆ ರೋಗಿಯ ಅರ್ಧ ಕಾಯಿಲೆ ಗುಣವಾದಂತೆಯೇ ಸರಿ. ಇದಕ್ಕಾಗಿಯೇ ರೋಗಿ ಸ್ಪಂದಿಸುತ್ತಿದ್ದಾನೆ ಎಂದು ಹೇಳುವುದು.
ಹಾಗೆಯೆ ನಮ್ಮ ಮೇಲೆ ನಕರಾತ್ಮಕ ತಲ್ಲಣಗಳು ಕಾಣಿಸಿಕೊಳ್ಳುತ್ತಿವೆ ಎಂಬ ಅರಿವು ಮೂಡುವಾಗಲೇ ಎಚ್ಚರವಹಿಸಬೇಕು.
ಕೆಲವೊಮ್ಮೆ ನಮಗರಿವಿಲ್ಲದಿದ್ದರು ಇತರರು ಗುರುತಿಸಿರುತ್ತಾರೆ. ಅವರು ಪ್ರಸ್ತಾಪ ಮಾಡಿಯೇ ಮಾಡುತ್ತಾರೆ. ಅದನ್ನು ಉದಾಸೀನ ಮಾಡದೆ ಅದರಿಂದ ಬಿಡಿಸಿಕೊಳ್ಳುವ ಮಾರ್ಗ ಹುಡುಕಬೇಕು.
ಹೆದರಬೇಕಾದ ಪ್ರಸಂಗವಿಲ್ಲ. ಎಲ್ಲಾ ಸಂಕಷ್ಟಗಳಿಗೂ ಪರಿಹಾರ ಇದ್ದೇಇದೆ. ಇದು ಪ್ರಕೃತಿ ನಿಯಮ.
ಇದು ದೇವರ ನಿಯಮ. ದೈವಿಕತೆ ಎಂಬುದು ಅಗೋಚರ ಶಕ್ತಿ. ವಿಶ್ವಾಸ ಇರಬೇಕು.
ಯಾವುದೇ ಕಾರಣಕ್ಕೂ ನಿರಾಶೆಗೆ ಒಳಗಾಗಬಾರದು. ಸ್ವಾಭಿಮಾನ, ಅಹಂ, ತಮಗೆ ಕುಂದು ಬರಬಹುದೆಂಬ ಚಿಂತೆ, ಹಠ, ಅತಿಯಾದ ಕರ್ತವ್ಯ ಪ್ರಜ್ಞೆಗಳಂತವುಗಳನ್ನು ತೊರೆದು ನಮ್ಮನ್ನು ನಾವು ಉಳಿಸಿಕೊಳ್ಳಲು ಅಗೋಚರ ದೇವಬಲದಲ್ಲಿ, ನಮ್ಮೊಳಗಿನ ಅಂತರಾಳದ ಸಹವಾಸದಲ್ಲಿ ವಿಶ್ವಾಸವಿಡಬೇಕು.
ಮುಖ್ಯವಾಗಿ ನಮಗೆ ದೊರಕುವ ಸಮಯವನ್ನು ಶೂನ್ಯತೆಯಲ್ಲಿ ಹರಿದಾಡಲು ಬಿಡಬಾರದು!!
ಏಕೆಂದರೆ ನಾವಿದ್ದರೇನೆ ಈ ಪ್ರಪಂಚ!!!]


- ರಾಬರ್ಟ್ ಕವನ್ರಾಗ್, ಮೈಸೂರು. -

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...