ಮಂಗಳವಾರ, ನವೆಂಬರ್ 17, 2020

ಇರುವಾಗ ಇಲ್ಲದ್ದು!!!?


ಇರುವಾಗ ಇಲ್ಲದ್ದು!!

ಜೀವಿಗಳು ಒಂದಿಲ್ಲೊಂದು ದಿನ ಚಿರ ಮೌನದಲಿ ಪಂಚಭೂತಗಳೊಳಗೆ ಲೀನವಾಗಲೇಬೇಕು.            

ಆಕಸ್ಮಿಕ, ನಿಗದಿತ.... ಹೇಗಿದ್ದರೂ ಸರಿ ಆರೋಗ್ಯ-ಅನಾರೋಗ್ಯದ ಸ್ಥಿತಿಯಲ್ಲಿ ಯಾವುದೇ ಬೇಧವಿಲ್ಲದೆ ಕೊನೆಗೆ ಪವಡಿಸಲೇಬೇಕು.                                      

ದಿಕ್ಕಿಲ್ಲದವರೂ ಸರಿ, ಬಾಂಧವ್ಯಗಳ ಬಂಧನದಲ್ಲಿದ್ದರೂ ಸರಿ ವಯಸ್ಸಿನ ಮಿತಿಯಿಲ್ಲದೆ ಮೌನಲೋಕದೊಳಗೆ ಪ್ರವೇಶಿಸಲೇಕು.                                                

ಧಾರ್ಮಿಕ ನಂಬಿಕೆಯಲ್ಲಿ ಕೊನೆಯಲ್ಲ ಆರಂಭವೆಂದರೂ ಸಹ ಸ್ತಬ್ದತೆಯ ಆಲಿಂಗನದಲಿ ನಿಸ್ತೇಜವಾಗಲೇಕು. 

ಐಷರಾಮಿಯೊಂದಿಗೆ ಏಕಾಂಗಿಯಾದರೂ ಸರಿ, ಪ್ರಕೃತಿ ವಿಕೋಪದಲಿ ಸಿಲುಕಿ ಜೊತೆಜೊತೆಯಾದರೂ ಸರಿ ಕತ್ತಲ ಕೋಣೆಯೊಳಗೆ ಪ್ರವೇಶಿಸಲೇಕು.                        

ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪ್ರತ್ಯಕ್ಷವಾಗಿ ಕಂಡುಕೊಂಡ ನಿರಾಕರಿಸಲಾಗದ ಶಾಂತ ಸ್ವರೂಪದ ಕಡು ಸತ್ಯವಿದು.

ಧರೆಯೊಳಗೆ ಮರೆಯಾಗಲು ಸಿದ್ದಗೊಂಡಿರುವ ಶರೀರದ ಇರುವಿಕೆಯಲ್ಲಿ ಕಂಡುಕೇಳಿದ ಅನೇಕ ವಿಚಾರಗಳು ನಿಟ್ಟುಸಿರಿನ ಮೂಲಕ ಎಲ್ಲರ ನಾಲಿಗೆಗಳಿಂದ ಶಬ್ದವಾಗಿ ಹೊರಬರುತ್ತಿರುತ್ತದೆ.

ಇತ್ತೀಚೆಗೆ ಅಂತದ್ದೇ ಸಂದರ್ಭದಲ್ಲಿ ನೆಲದೊಳಗೆ ಇಡುತ್ತಿದ್ದ ಪೆಟ್ಟಿಗೆಯನ್ನು ನೋಡಿ ರೋಧಿಸುತ್ತಾ ಆತನ ಪತ್ನಿ,       

"ಕ್ಷಮಿಸಿ ಬಿಡಿ ನನ್ನನ್ನು!  ಬನ್ನಿ ಮನೆಗೆ. ಮತ್ತೆಂದು ನಿಮಗೆ ನೋವು ಕೊಡಲ್ಲ".                                          

ಮತ್ತೊಂದು ಇಂತಹದ್ದೇ ಸಂಕಟದ ದನಿ,  "ಕ್ಷಮಿಸಿ... ತಪ್ಪು ಮಾಡಿಬಿಟ್ಟೆ. ಇನ್ಯಾವತ್ತೂ ನಿಮ್ಮನ್ನ ಬೈಯ್ಯೋದಿಲ್ಲ...." ಇವೆರಡು ಅಗಲಿದ ಪತಿಗೆ ಚಿರಮೌನದ ಕೊನೆ ಗಳಿಗೆಯ ಕ್ಷಮಾಯಾಚನೆ!

ಇಂತಹ ಮಾತುಗಳು, ಅಳು, ರೋಧನೆ, ದುಃಖ, ಪಶ್ಚಾತ್ತಾಪದ ಕೂಗುಗಳ ವಿವಿಧ ತರನಾಗಿ ಕೇಳಿರಬಹುದು!

ಇಂತಹ ಮಾತುಗಳನ್ನು ಕೇಳುವ ಅಲ್ಲಿನ ಪ್ರತ್ಯೇಕ ಸಾಕ್ಷಿಗಳು ತಮ್ಮದೇ ಆದ ವಿಚಾರ ಲಹರಿಗಳನ್ನು ಹರಿಯಬಿಡುತ್ತಾರೆ. ಇರಲಿ.ಮಾನವ ಸಹಜ!!!

ಇಲ್ಲಿ ಉದ್ಭವವಾಗುವುದು ಒಂದೇ ಪ್ರಶ್ನೆ....?!

ಸತ್ಯವನ್ನರಿತ್ತಿದ್ದರೂ, ಎಲ್ಲರಿಗೂ ಜ್ಞಾನವಿದ್ದು ಪರಿವರ್ತನೆಯ ನಿರ್ಧಾರ ಮೂಡಿದ್ದರೂ ಸಹ ಸಂಯಮ ಕಳೆದುಕೊಂಡು ಎಲ್ಲವನ್ನೂ ಮರೆತು ಅಸಾಮಾನ್ಯದಿಂದ ಸಾಮಾನ್ಯ ಸ್ಥಿತಿಗೆ ತಲುಪುತ್ತಾರಲ್ಲ ಯಾಕೆ?!!!

ಅದೇ ದ್ವೇಷ, ಅನುಮಾನ, ಕೋಪ, ಹೀಯಾಳಿಕೆಗಳಂತಹ ಅರ್ಥವಿಲ್ಲದ, ಸಮಾಧಾನ ನೀಡದ ಇಂತಹುಗಳನ್ನೇ ಮತ್ತೆಮತ್ತೆ ಬೆಂಬತ್ತಿ ಹೋಗುವ ಮೂಲ ಕಾರಣವೇನು?

ಕೆಲ ನಿಮಷಗಳ ತಾಳ್ಮೆ, ಕೊಂಚ ಪ್ರೀತಿ, ದೃಢವಾದ ನಂಬಿಕೆ, ಅರ್ಥೈಸಿಕೊಂಡು ಪ್ರಯೋಗಿಸುವ ನಿಖರವಾದ ಹೊಂದಾಣಿಕೆಗಳೊಂದಿಗೆ ತ್ಯಾಗ, ಕ್ಷಮೆಯ ಉದಾರತೆ ಇದ್ದರೆ ಒಳಿತಲ್ಲವೇ?!

ಕಿಡಿ ಹೊತ್ತಿಸಿ ಉರಿದ ಮೇಲೆ ಅದರ ದಟ್ಟಣೆಯ ಹೊಗೆಯೊಳಗೆ ಕಣ್ಣೀರ ಹರಿಸಿದರೆ ಫಲವೇನು ಅಲ್ಲವೆ?!

ಜೀವಂತವಾಗಿ ಇದ್ದರೆ ಜೀವ ಎಂದು ಬೇಕಾದರೂ ಒಂದಾಗಬಲ್ಲದು. ಮಣ್ಣೊಳಗೆ ಮರೆಯಾದ ಮನಸ್ಸು ಮತ್ತೆ ಮಾತಾಡಬಲ್ಲದೇ?! ಹೊಂದಿಕೊಳ್ಳುವ ಮನೋಭಾವನೆಗೆ ಮಾನ್ಯತೆ ಕೊಟ್ಟರೆ ಮನುಷ್ಯತ್ವದ ಮಹಡಿಯಲ್ಲಿ ಮಹರಾಜರಾಗಿ, ಮಹಾರಾಣಿಯಾಗಿ ಮೆರೆದಾಡಬಹುದಲ್ಲ!!?

ಮನಸಾಕ್ಷಿಯ ಮಧುರ ಬಾಂಧವ್ಯವನ್ನು ಬಳಸಿಕೊಳ್ಳೋಣ....


: ರಾಬರ್ಟ್ ಇ. ಕವನ್ರಾಗ್,  ಮೈಸೂರು :"

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...