‘ಒಲವು ಫೌಂಡೇಶನ್ (ರಿ)’ ಹಾಗೂ ‘ಏ. ಎಸ್. ಜೆ. ಕಣ್ಣಿನ ಆಸ್ಪತ್ರೆ’ ಸಹಯೋಗದಲ್ಲಿ
ಶಾಲಾ ಮಕ್ಕಳಿಗೆ ‘ಕಣ್ಣಿನ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ ಅಭಿಯಾನ
ಮೈಸೂರು ೨೦ ಡಿಸೆಂಬರ್ ೨೦೨೨ : ‘ಒಲವು ಫೌಂಡೇಶನ್ (ರಿ)’ ಹಾಗೂ ‘ಏ.ಎಸ್.ಜಿ. ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಅಕ್ಟೋಬರ್ ೧೩ ಮತ್ತು ೧೪ನೇ ತಾರೀಖಿನಂದು ‘ವಿಶ್ವ ದೃಷ್ಟಿ ದಿನಾಚರಣೆ’ ಅಂಗವಾಗಿ ಶಾಲಾ ಮಕ್ಕಳಿಗೆ ಕಣ್ಣಿನ ಬಗ್ಗೆ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರದ ಅಭಿಯಾನವು ಮುಂದುವರೆದಿದೆ.
ಮೈಸೂರಿನ ಬನ್ನಿಮಂಟಪದ ಎಸ್.ಎಸ್. ನಗರದ ‘ಅಲ್-ಕಬೀರ್ ಶಾಲೆ’ಯಲ್ಲಿ ಶಿಬಿರವನ್ನು ಇಂದು ಆಯೋಜಿಸಲಾಗಿತ್ತು. ಸುಮಾರು ೧೫೦ಕ್ಕೂ ಹೆಚ್ಚು ಶಾಲಾ ಮಕ್ಕಳು, ಶಿಕ್ಷಕ ಶಿಕ್ಷಕಿಯರು ಹಾಗೂ ಶಾಲಾ ಸಿಬ್ಬಂದಿಗಳು ಶಿಬಿರದ ಉಪಯೋಗವನ್ನು ಪಡೆದರು.
ಆಸ್ಪತ್ರೆಯ ಮೇಲ್ವಿಚಾರಕರಾದ ವಿಜಯನ್ ಫ್ರಾನ್ಸಿಸ್ರವರು ಕಣ್ಣಿನ ಜಾಗೃತಿಯ ಬಗ್ಗೆ ವಿವರವಾಗಿ ಎಲ್ಲರಿಗೂ ತಿಳಿಸಿಕೊಟ್ಟರು. ‘ಒಲವು ಫೌಂಡೇಶನ್’ನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಬರ್ಟ್ ಇ. ಕವನ್ರಾಗ್, ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ಸಾಪ್ಟ್ ಸ್ಕಿಲ್ ತರಬೇತಿದಾರರಾದ ಸಯ್ಯದ್ ಅಫ್ತಾಬ್,……ಆಸ್ಪತ್ರೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ನಾಗೇಂದ್ರ, ಡಾ. ಶಿಲ್ಪಶ್ರೀ, ಫೌಂಡೇಶನ್ನಿನ ಮನೋಹರ್, ಶಾಲಾ ಮೇಲ್ವಿಚಾರಕರಾದ ಸೈದಾ ನಿದಾ, ಶಿಕ್ಷಕ ಶಿಕ್ಷಕಿ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು ಶಿಬಿರ ಉತ್ತಮವಾಗಿ ನೆರವೇರಲು ಸಹಕರಿಸಿದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ