ಮೈಸೂರಿನ ಸಂತ ಜೋಸೆಫರ ಪ್ರಧಾನಾಲಯ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕ್ರೈಸ್ತ ಪೀಠದ ಸಹಯೋಗದಲ್ಲಿ
ಸಂತ ಫಿಲೋಮಿನಾ ಪುಣ್ಯಕ್ಷೇತ್ರ ಆವರಣದಲ್ಲಿ
ವಿಶ್ವ ಶಾಂತಿ ದಿನಾಚರಣೆ
ಮೈಸೂರು ಜನವರಿ ೩೦, ೨೦೨೩ : ವಿಶ್ವದಲ್ಲಿ ಶಾಂತಿ, ಪ್ರೀತಿ, ಐಕ್ಯತೆಯನ್ನು ನೆಲಸುವಂತೆ ಶಾಂತಿ ದಿನಾಚರಣೆಯನ್ನು ಸರ್ವ ಧರ್ಮಗಳ ಸಂದೇಶದ ಮೂಲಕ ಆಚರಿಸಲಾಯಿತು.
ವಿಶ್ರಾಂತ ಮಹಾಧರ್ಮಾಧ್ಯಕ್ಷರು ಹಾಗೂ ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಗಳಾದ ಪರಮ ಪೂಜ್ಯ ಡಾ. ಬೆರ್ನಾಡ್ ಮೊರಾಸ್ರವರು ಅಧ್ಯಕ್ಷತೆಯನ್ನು ವಹಿಸಿದ್ದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಡಾ. ಕೆ. ಜಾವೀದ್ ನಯಿಮ್, ಮೈಸೂರು ಧರ್ಮಕ್ಷೇತ್ರದ ಎಪಿಸ್ಕೋಪಲ್ ಶ್ರೇಷ್ಠಗುರುಗಳಾದ ಅತಿ ವಂ. ಡಾಮಿನಿಕ್ ವಾಸ್ ಓಸಿಡಿಯವರು ಆಗಮಿಸಿದ್ದರು.
ಗೌರವಾನ್ವಿತ ಅತಿಥಿಗಳಾಗಿ ಮೈಸೂರು ಧರ್ಮಕ್ಷೇತ್ರದ ಶ್ರೇಷ್ಟಗುರು ಅತಿ ವಂ. ಆಲ್ಪ್ರೆಡ್ ಜಾನ್ ಮೆಂಡೊನ್ಸಾ, ಮೈಸೂರು ವಿಶ್ವವಿದ್ಯಾಲಯದ ಕ್ರೈಸ್ತ ಧರ್ಮ ವಿಭಾಗದ ಅಧ್ಯಕ್ಷರಾದ ವಂ. ಡಾ. ವ್ಯಾಲಿಂಟಿನ್ ರಾಜೇಂದ್ರ ಕುಮಾರ್, ಮೈಸೂರು ವಿಶ್ವವಿದ್ಯಾಲಯದ ಕ್ರೈಸ್ತ ಧರ್ಮ ವಿಭಾಗದ ಪ್ರೊಪೆಸರ್ ಡಾ. ಜಾನ್ ಪೀಟರ್ ಲಾಜರ್ ಉಪಸ್ಥಿತರಿದ್ದರು.
ಸಂತ ಜೋಸೆಫರ ಪ್ರಧಾನಾಲಯದ ಧರ್ಮಗುರುಗಳಾದ ವಂ. ಗುರು ಸ್ಟ್ಯಾನಿ ಡಿ’ಆಲ್ಮೇಡಾ ರವರು ಎಲ್ಲರನ್ನೂ ಸ್ವಾಗತಿಸಿದರು. ಗಣ್ಯರು ದೀಪ ಬೆಳಗುವುದರೊಂದಿಗೆ ಮತ್ತು ಶಾಂತಿಯ ಸಂದೇಶವಾಗಿ ಪಾರಿವಾಳ ಹಾರಿಬಿಡುವುದರೊಂದಿಗೆ ಶಾಂತಿಯ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಚಿದಾನಂದ ಸ್ವಾಮೀಜಿ, ಶ್ರೀ ಜಾವೀದ್ ನಯಿಮ್ ಹಾಗೂ ಅತೀ ವಂ. ಡಾಮಿನಿಕ್ ವಾಸ್ರವರು ಶಾಂತಿಯ ಕುರಿತು ತಮ್ಮ ಮನದಾಳದ ಸಂದೇಶವನ್ನು ಸಾರಿದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ