ಶನಿವಾರ, ಜನವರಿ 28, 2023

'ಸೆಂಟ್ ರ‍್ನಾಲ್ಡ್ ಕೇಂದ್ರೀಯ ವಿದ್ಯಾಲಯ' ದಲ್ಲಿ 'ಉಚಿತ ಕಣ್ಣಿನ ತಪಾಸಣೆ ಹಾಗೂ ಜಾಗೃತಿ ಶಿಬಿರ'

    'ಒಲವು ಫೌಂಡೇಶನ್' ಹಾಗೂ ಮೈಸೂರಿನ 'ಏ.ಎಸ್.ಜಿ. ಕಣ್ಣಿನ ಆಸ್ಪತ್ರೆ' ಯ                        ಸಹಯೋಗದಲ್ಲಿ 'ಸೆಂಟ್ ರ‍್ನಾಲ್ಡ್ ಕೇಂದ್ರೀಯ ವಿದ್ಯಾಲಯ' ದಲ್ಲಿ                  'ಉಚಿತ ಕಣ್ಣಿನ ತಪಾಸಣೆ ಹಾಗೂ ಜಾಗೃತಿ ಶಿಬಿರ'


2023 ಜನವರಿ 23 ಮತ್ತು 24 ರಂದು ನಡೆದ ಎರಡು ದಿನಗಳ ಈ ಅಭಿಯಾನದ ಶಿಬಿರದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ಸೇರಿದಂತೆ ಸುಮಾರು 1,300 ಹೆಚ್ಚು ಜನರು ಕಣ್ಣಿನ ತಪಾಸಣೆ ಮಾಡಿಕೊಂಡರು.




ಬೆಳಗ್ಗಿನ ಶಾಲಾ ಪ್ರಾರ್ಥನಾ ಸಮಯದಲ್ಲಿ ಆಸ್ಪತ್ರೆಯ ಕೇಂದ್ರೀಯ ವ್ಯವಸ್ಥಾಪಕರಾದ ವಿಜಯನ್ ಫ್ರಾನ್ಸಿಸ್,  ಒಲವು ಫೌಂಡೇಶನ್ ನ್ನಿನ ಸಂಸ್ಥಾಪಕ ರಾಜ್ಯಾದ್ಯಕ್ಷರಾದ          ರಾಬರ್ಟ್  ಕವನ್ರಾಗ್, ಆಸ್ಪತ್ರೆಯ ಉಸ್ತುವಾರಿಗಳಾದ ನಾಗೇಂದ್ರ, ಫೌಂಡೇಶನ್ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ನೇತ್ರ ತಜ್ಞರಾದ ಡಾ. ಶಿಲ್ಪಶ್ರೀ, ಡಾ. ಗಿರೀಶ್ ,ಮಧುರವರು, ಫೌಂಡೇಶನ್ನಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಜಯನ್ ರವರು ಸವಿವರವಾಗಿ ಎಲ್ಲರಿಗೂ ಕಣ್ಷಿನ ಜಾಗೃತಿಯ ಬಗ್ಗೆ ಅರಿವು ಮೂಡಿಸಿದರು. 

ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಫಾದರ್ ಸುನಿಲ್ ಮೆನೆಜೆಸ್ ರವರು ವಿದ್ಯಾರ್ಥಿಗಳಲ್ಲಿ ಶಿಬಿರದ ಮಹತ್ವವನ್ನು ತಿಳಿಕೊಟ್ಟು  ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ವಿದ್ಯಾಸಂಸ್ಥೆಯ ಮುಖ್ಯ ವ್ಯವಸ್ಥಾಪಕರಾದ ಫಾದರ್ ಲಾರೆನ್ಸ್ ಕೊರೇ, ನಿರ್ವಾಹಕರಾದ ಫಾದರ್ ಸಾಲೋಮನ್ ರೆಡ್ಡಿರವರು ಸಲಹೆ ಸೂಚನೆಗಳನ್ನು ನೀಡಿದರು. ಸಂಸ್ಥೆಯ




ಸಂಸ್ಥೆಯ ಶಿಕ್ಷಕರುಗಳು, ಶಾಲಾ ಸಿಬ್ಬಂದಿ ರ‍್ಗದವರು ಶಿಬಿರವು ಉತ್ತಮವಾಗಿ ನೆರವೇರಲು ಸಹಕರಿಸಿದರು.

ಕಾಮೆಂಟ್‌ಗಳಿಲ್ಲ:

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...