ಶನಿವಾರ, ಡಿಸೆಂಬರ್ 3, 2022

ಅಂತರಶಾಲಾ ಕೊಕೊ ಪಂದ್ಯಾವಳಿ

 ‘ಶಿಕ್ಷಕರ್ಣಿ ಕೇಂದ್ರೀಯ ಶಾಲೆ’ ಮತ್ತು ‘ಒಲವು ಫೌಂಡೇಶನ್ (ರಿ)’ ಸಹಯೋಗದಲ್ಲಿ

ಅಂತರಶಾಲಾ ಕೊಕೊ ಪಂದ್ಯಾವಳಿ



ಮೈಸೂರು ೦೩ ಡಿಸೆಂಬರ್, ೨೦೨೨ : ಮೈಸೂರು ನಗರದ ಹೆಬ್ಬಾಳದಲ್ಲಿರುವ ‘ಶಿಕ್ಷಕರ್ಣಿ ಕೇಂದ್ರೀಯ ಶಾಲೆ’ಯಲ್ಲಿ ಶಾಲಾಸಂಸ್ಥಾಪಕರಾದ ‘ದಿ. ವಿ. ವೆಂಕಟಗಿರಿಯವರ ಸ್ಮರಣಾರ್ಥ’  ಅಂತರಶಾಲಾ ಕೊಕೊ ಪಂದ್ಯಾವಳಿಯನ್ನು ‘ಒಲವು ಫೌಂಡೇಶನ್ (ರಿ)’ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ವಿವಿಧ ಶಾಲೆಗಳ ೨೦  ವಿದ್ಯಾರ್ಥಿ ವಿದ್ಯಾರ್ಥಿನಿಯರ ತಂಡಗಳು ಪಂದ್ಯದಲ್ಲಿ ಪಾಲುಗೊಂಡಿದ್ದರು. 

ಬೆಳಗ್ಗೆ ೯ ಗಂಟೆಗೆ ಪಂದ್ಯಾವಳಿ ಪಾರಿವಾಳಗಳನ್ನು ಹಾರಿಸುವುದರ ಮೂಲಕ ಚಾಲನೆ ನೀಡಿದರು. ಇದಕ್ಕು ಮುನ್ನ ದಿವಂಗತರ ಪೋಟೋಗೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡಿ ಸ್ಮರಿಸಲಾಯಿತು.

ವೇದಿಕೆಯಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ಲೋಕೇಶ್ ವಿ. ಖಜಾಂಚಿ ಆರ್. ಲಿಂಗರಾಜು, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಸೋಮಶೇಖರ್, ‘ಒಲವು ಫೌಂಡೇಶನ್’ನ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್, ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ಹಿರಿಯ ದೈಹಿಕ ಶಿಕ್ಷಕರಾದ ವೇಣುಗೋಪಾಲ್, ಶಾಲೆಯ ಪ್ರಾಂಶುಪಾಲರಾದ ವಿಲಿಯಂ ಪುಷ್ಪರಾಜ್, ಉಪಪ್ರಾಂಶುಪಾಲರಾದ ಸರಿತಾ ಆರ್. ಶೆಟ್ಟಿ, ಮುಖ್ಯೋಪಾಧ್ಯಾಯರಾದ ಏ. ಎನ್. ನಂಜೇಗೌಡರು ಉಪಸ್ಥಿತರಿದ್ದರು. ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಹಾಜರಿದ್ದರು. ಶಿಕ್ಷಕರ್ಣಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂಧಿಗಳು ಕಾರ್ಯಕ್ರಮವನ್ನು ಅÀಚ್ಚುಕಟ್ಟಾಗಿ ನೆರವೇರಿಸಲು ಸಹಕರಿಸಿದರು.

ಕಾಮೆಂಟ್‌ಗಳಿಲ್ಲ:

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...