ಸೋಮವಾರ, ಆಗಸ್ಟ್ 24, 2020

 'ನಮ್ಮನ್ನೇ ನಾವು ಮಾರಿಕೊಳ್ಳುವ ಅಧೋಗತಿ!'


ಅನ್ನದಾನ, ವಿದ್ಯಾದಾನ, ಸ್ವತ್ತಿನ ದಾನಗಳೆಲ್ಲವೂ ಸಾಧಾರಣವಾಗಿ ಒಬ್ಬ ವ್ಯಕ್ತಿ ಜೀವಂತ ಇರುವಾಗ ಮಾಡುವುದಾಗಿದೆ.

ನೇತ್ರದಾನ,‌ ಕಿಡ್ನಿ ದಾನ, ಅಂಗಾಂಗ ದಾನಗಳು ಸ್ವ ಇಚ್ಛೆಯಿಂದ ತಮ್ಮನ್ನೇ ಅರ್ಪಿಸಿಕೊಳ್ಳುವುದಾಗಿದೆ.
ಇದು ಒಬ್ಬ ವ್ಯಕ್ತಿಯ ಮರಣದ ನಂತರದ್ದಾಗಿದೆ.

ಇವೆರಡರ ಕಾಲ ಅದಲು ಬದಲಾದರೆ ಏನೋ ವಿಫಲತೆ ಸಂಭವಿಸಿದೆ ಎಂಬುದು ಖಚಿತ.
ಜೀವಂತವಾಗಿ ಇರುವಾಗಲೇ ಪ್ರಾಣ ಸ್ನೇಹಿತನಿಗಾಗಿಯೊ, ಒಡಹುಟ್ಟಿದವರಿಗಾಗಿಯೊ, ಸಂಗಾತಿ ಹೆತ್ತವರಿಗಾಗಿಯೊ ತಮ್ಮ ಕಿಡ್ನಿಯನ್ನು ದಾನ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ.
ಸಾಯುವ ಕೊನೆಯ ಗಳಿಗೆಯಲ್ಲಿ ತಮ್ಮನ್ನೇ ದಾನವಾಗಿ ಕೊಟ್ಟ ಉದಾಹರಣೆಗಳೂ ಇವೆ.
ಆದರೆ ಜೀವನದಲ್ಲಿ ಸೋತಿದ್ದೇವೆ, ಬದುಕುವ ದಾರಿ ಕಾಣುತ್ತಿಲ್ಲ, ಒಂಟಿತನ ಕಾಡಿಸುತ್ತಿದೆ .... ಇಂತಹ ಕಾರಣಗಳಿಂದ ಅನೇಕರು ಅಂಗದಾನಕ್ಕೆ ಸಿದ್ಧರಾಗಿಬಿಡುತ್ತಾರೆ.
ಹಣದ ಸಂಕಷ್ಟದಿಂದ ಸಾಲವನ್ನು ತೀರಿಸಲು ಸಾಧ್ಯವಾಗದೆ ನರಳುತ್ತಿರುವವರಲ್ಲಿ‌ಅನೇಕರು ಇಂತಹ ಕೃತ್ಯಕ್ಕಿಳಿಯಿತ್ತಾರೆ.

ಇದು ಸೂಕ್ತವೇ? ಎಂದು ಯೋಚಿಸುವುದಕ್ಕಿಂತಲೂ ಇವೆಲ್ಲವೂ ಅಜ್ಞಾನದ, ಅತಿರೇಕದ ಬುದ್ಧಿಹೀನ ಕೆಲಸವಾಗಿದೆ ಎಂಬುವುದರಲ್ಲಿ‌ ಎರಡು ಮಾತಿಲ್ಲ.

ಇಂತಹವರು,
@ ತಮ್ಮನ್ನು ತಾವು ಮೊದಲು ಗೌರವಿಸಿ, ಪ್ರೀತಿಸಿಕೊಳ್ಳಬೇಕು. ಏಕೆಂದರೆ ಅಂಗಾಂಗಗಳನ್ನು ಕಳೆದುಕೊಂಡರೆ ಮತ್ತೆ ಪಡೆಯಲು ಅಸಾಧ್ಯ.
@ ಎಲ್ಲಾ ಸಮಸ್ಯೆಗಳಿಗೂ ಪರಿಹಾರ, ಕಷ್ಟಕ್ಕೆ ಅಂತ್ಯವಿದೆ ಎಂಬ ವಿಶ್ವಾಸವಿರಬೇಕು.
@ ಈ ಜಗತ್ತಿನಲ್ಲಿ ಯಾರೂ ಒಂಟಿಯಲ್ಲ.
@ ತಮಗಿಂತಲೂ ತೊಂದರೆ, ಕಷ್ಟದಲ್ಲಿರುವವರನ್ನು ಅದರಲ್ಲೂ ಆಸ್ಪತ್ರೆ, ಅನಾಥಾಶ್ರಮ, ಅಂಗಹೀನತೆ, ಬುದ್ಧಿಮಾಂದ್ಯತೆಯವರನ್ನು ಭೇಟಿಯಾಗಬೇಕು.
@ ತಮ್ಮಲ್ಲಿರುವ ಧನಾತ್ಮಕತೆಗಳನ್ನು ಗುರುತಿಸಿಕೊಂಡು ಅವುಗಳನ್ನು ಅಭಿವೃದ್ಧಿಪಡಿಸಿಕೊಂಡು ಚಿಂತೆಗಳಿಗೆ ಮುಕ್ತಾಯ ಹಾಡುವುದು.
@ ಪ್ರೀತಿ, ಕ್ಷಮೆ, ಸೇವೆಗಳಂತ ಅಂತರಿಕ ತೃಪ್ತಿಗೆ, ಸಮಾಜಮುಖಿ ಕಾರ್ಯಗಳಲ್ಲಿ ಸಮಯ ಕಳೆಯುವುದು.
@ ಆಧ್ಯಾತ್ಮಿಕತೆಯ, ‌ಸಾಧನೆಯ ಹಾದಿಯಲ್ಲಿ ನಡೆಯುವುದು.
ಇಂತಹ ಒಳ್ಳೆಯ ವಿಷಯಗಳತ್ತ ತಮ್ಮನ್ನು ತಾವು ಕಂಡುಕೊಂಡರೆ, ಇಲ್ಲಸಲ್ಲದ ಯೋಚನೆಗಳು ಮಾಯವಾಗಿ ಮನಸ್ಸು ನಿರ್ಮಲಗೊಂಡು ಬದುಕಿಗೆ ಅರ್ಥ ದೊರಕುತ್ತದೆ.
ಹುಟ್ಟಿದವರು ಒಂದು ದಿನ ಉಸಿರನ್ನು ತ್ಯಜಿಸಲೇಬೇಕು, ಆದರೆ ತಮ್ಮನ್ನು ತಾವೇ ಸಂಪೂರ್ಣ ಶೂನ್ಯ ಎಂದುಕೊಳ್ಳಬಾರದು. ಏಕೆಂದರೆ ದೇವರ ಪ್ರೀತಿಯ, ದೇವರ ರೂಪದ ಮಾನವರಿಗಾಗಿಯೇ ಸಮಸ್ತ ಸೃಷ್ಟಿಯೂ ಉಂಟು ಮಾಡಲ್ಪಟ್ಟಿತು. ಯಾವ ಕಾರಣಕ್ಕೂ ನಮ್ಮನ್ನು ನಾವು ಮಾರಿಕೊಳ್ಳುವುದು ಸಲ್ಲದು. ಏಕೆಂದರೆ
ಮಾನವನಿಗೆ ತನ್ನನ್ನು ತಾನು ಮಾರಿಕೊಳ್ಳುವ ಅಥವಾ ಅಂತ್ಯಗೊಳಿಸಿಕೊಳ್ಳುವ ಯಾವುದೇ ಹಕ್ಕಿಲ್ಲ.


: ರಾಬರ್ಟ್ ಕವನ್ರಾಗ್, ಮೈಸೂರು :

ಸೋಮವಾರ, ಆಗಸ್ಟ್ 10, 2020

ಸಾಮಾಜಿಕ ಅಂತರ

 

ಆಂತರ್ಯ + ಮನಸ್ಸು

 ಆಂತರ್ಯ + ಮನಸ್ಸುಗಳು ಮೌನ ತಾಳಿದಾಗ!

ಬೆಳಕು ಎಲ್ಲಕ್ಕಿಂತಲೂ ವೇಗವಾಗಿ ಚಲಿಸುತ್ತದೆ. ಆದ್ದರಿಂದಲೇ ಮಿಂಚಿನ ನಂತರದಲಿ ಗುಡುಗು ಕೇಳಿಸುವುದು. ಬೆಳಕಿಗಿಂತಲೂ ವೇಗದಲ್ಲಿ ತಲುಪುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಅದು ಪ್ರಪಂಚದ ಯಾವ ಮೂಲೆಗಾದರೂ ಏನೂ ಬ್ರಹ್ಮಾಂಡವನ್ನೇ ಸುತ್ತಿಬರುತ್ತದೆ. ಅದು ಯಾರ, ಯಾವುದೇ ಹಿಡಿತಕ್ಕೂ ಸಿಗದಂತಹ ಮಹಾ ಪ್ರಚಂಡ. ವೈಶಿಷ್ಟ್ಯವೆಂದರೆ ಅದು ಯಾರಲ್ಲಿದೆಯೊ ಆ ವ್ಯಕ್ತಿಯ ಅಪ್ಪುಗೆಯಲ್ಲಿ ಮಾತ್ರ ತನ್ನನ್ನು ತಗ್ಗಿಸಿಕೊಳ್ಳಬಲ್ಲದು. ಅದು ಅ ವ್ಯಕ್ತಿಯ ವ್ಯಕ್ತಿತ್ವದ ಭಾವಂತರಂಗ ಸ್ಪರ್ಶದ ಪರಿಮಿತಿಯಲ್ಲಿ ಮಾತ್ರವೇ ಸಾಧ್ಯ. ಆ ಮನಸ್ಸು ಅಥವಾ ಚಿತ್ತವೇ ಅಂತರಾಳದ ಸ್ನೇಹಿತ. ಈ ಗೆಳೆಯರಿಬ್ಬರೂ ಪ್ರತಿ ಹೃದಯದ ತುಡಿತಗಳನ್ನೂ ಬಲ್ಲವರಾಗಿದ್ದು ಸದಾ ಮಾತನಾಡಿಕೊಂಡು ಅದರ ಸುಸ್ಥಿಗೆ ಯೋಜನೆಗಳನ್ನು ರೂಪಿಸುತ್ತಾರೆ.
ಒಬ್ಬ ವ್ಯಕ್ತಿಯ ಜ್ಞಾನ, ನಡತೆ, ಗುಣ, ರೂಪ, ಸ್ಥಿತಿಗತಿ, ಸಾಧನೆಗಳೆಲ್ಲವೂ ಇವುಗಳಲ್ಲಿ ಕೇಂದ್ರಿಕೃತವಾಗಿದೆ. ಅವುಗಳು ತಮ್ಮ ಮಾತನ್ನು ಅರೆಕ್ಷಣ ತಡೆಹಿಡಿದರೂ ಇಡೀ ವ್ಯಕ್ತಿ ವ್ಯಕ್ತಿತ್ವ ವಿರೂಪಗೊಳ್ಳುತ್ತದೆ.
ಮುಂದಿನ ದೃಷ್ಟಿಕೋನ, ಮುಂದಿನ ಯೋಜನೆಗಳು,‌ ಮುಂದಿನ ಬದುಕು ಇದ್ದಕ್ಕಿದ್ದ ಹಾಗೆ ತಿರುವನ್ನು ತೆಗೆದುಕೊಳ್ಳುತ್ತವೆ.
ಇದರಿಂದಲೆ ಸಾಧನೆಗಳತ್ತ ಪಯಣಿಸುವ ಭರವಸೆಯ ಬಲಗಳು, ಸಾಕ್ಷಾತ್ಕಾರದತ್ತ ಧಾವಿಸುವ ಸಾತ್ವಿಕ ನಿಲುವುಗಳು ತಮ್ಮತನವನ್ನು ಜಾರಿಸಿಬಿಟ್ಟು ಹೊಸ ಮಾರ್ಗದಲ್ಲಿ ಮುಂದುವರೆಯುತ್ತವೆ. ಇದರಿಂದ ಒಳಿತನ್ನು ಕಾಣಬಹುದು, ಅಳಿವನ್ನು ನಿರೀಕ್ಷಿಸಬಹುದು.
ಉತ್ತಮವಾದ ಹೊಸ ಪರಿಚಯವಿದ್ದರೆ ಯಾವ ತೊಂದರೆಗಳು ಇರದು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಭೀತಿಯನ್ನು ಉಂಟು ಮಾಡಬಲ್ಲ ತಾಪಕ್ಕೆ ದಾರಿಯಾದರೆ ಅನಾಹುತ ಸಂಭವಿಸುವುದು.
ತಿಳಿ ಹೇಳುವವರ ಒಂದು ದೃಢವಾದ ಮಾತು, ದಾರಿದೀಪದಂತಿರುವ ಒಂದೇ ಒಂದು ಕಿಡಿ ಅದು ಧಾರ್ಮಿಕವಾಗಿರಲಿ, ಸಾಮಾಜಿಕವಾಗಿರಲಿ ಮುಂಬರುವ ಅನುಭವಗಳನ್ನೇ ಆತಂಕಕಾರಿಯಾಗಿ ಪರಿಣಮಿಸಲು ಕಾರಣವಾಗುತ್ತವೆ.
ಆದ್ದರಿಂದ
- ವಿದ್ಯೆಗೆ ನದಿಯಾಗಿರುವ ಶಿಕ್ಷಕರು,
- ಜ್ಞಾನಕ್ಕೆ ಪೂರಣವಾಗಿರುವ ಮೇಧಾವಿಗಳು,
- ಧಾರ್ಮಿಕತೆಯ ಮೂಲಕ ಆತ್ಮ ಬೆಳವಣಿಗೆಗೆ ಆದರ್ಶ ಪ್ರಾಯರಾದವರು,
- ಸಾಧನೆಗಳ ಹಾದಿಯ ಸ್ಪೂರ್ತಿದಾಯಕರುಗಳ.......
* ಮನ-ಮನದಾಳದ ಮಾತಿನಲ್ಲಿ ನಿಖರವಾದ ಪದಗಳಿರಬೇಕು.
* ಸತ್ಯತೆಯ ಸಿಂಚನಗಳಾಗಿರಬೇಕು,
* ಸದ್ಗುಣಗಳನ್ನು ಶೃಂಗರಿಸಿಕೊಂಡ ರೂಪವಂತರಾಗಿರಬೇಕು.
* ಜ್ಞಾನದ ಕೊರತೆಗಳಿದ್ದರೂ ಸಾಮಾಜಿಕ ಧನಾತ್ಮಕ ಚಿಂತನೆಗಳ ಸುಗಂಧ ಸೂಸುವವರಾಗಿರಬೇಕು.
* ವಿದ್ಯಾವಂತರಲ್ಲದಿದ್ದರೂ ವಿಷಯಗಳ ಸಮರ್ಪಕ ಜಲಧಾರೆಯಾಗಿರಬೇಕು.
* ಸ್ವಾರ್ಥ, ಅಹಂಗಳಂತಹ ಅಲ್ಪತನಗಳ ಎದುರಾಳಿಯಾಗಿರಬೇಕು.
ಪ್ರಾಮಾಣಿಕತೆ, ಪರಿಶುದ್ದತೆ, ಪರಿಪೂರ್ಣತೆಗಳನ್ನು ಪಾಲಿಸಲು ಪ್ರಯತ್ನಿಸುತ್ತಾ ಪಾವನತೆಯನ್ನು ಪಡೆದುಕೊಂಡವರಾಗಿರಬೇಕು.
ಅಂತಿಮವಾಗಿ ತಾವು ತಮಗಾಗಿ ಅಲ್ಲ ತಮ್ಮಲ್ಲಿ ಭರವಸೆಯನ್ನಿಟ್ಟು ಬರುವವರ ಸೇವೆಯನ್ನು ಮಾಡುವವರು ಎಂಬ ಮನೋಭಾವದ ಮನುಷ್ಯರಾಗಿರಬೇಕು.


- ರಾಬರ್ಟ್ ಕವನ್ರಾಗ್, ಮೈಸೂರು

*ನಿರಾಶೆ ನಿರ್ನಾಮಕ್ಕೆ ಮುನ್ಸೂಚನೆ*

 *ನಿರಾಶೆ ನಿರ್ನಾಮಕ್ಕೆ ಮುನ್ಸೂಚನೆ*


ನೋವು, ದುಃಖ, ಸಂಕಟ, ಭಯ, ಕಳವಳ, ಕೊರಗು, ಕೀಳರಿಮೆ, ಕೋಪ, ಒಂಟಿತನ, ಅತೃಪ್ತಿ, ಉದ್ವೇಗ, ವ್ಯಥೆಗಳಂತ ನಿರಾಶೆಗೆ ಸಂಬಂಧಪಟ್ಟ ಅಸ್ವಾಭಾವಿಕ ವರ್ತನೆಗಳು ನಮ್ಮನ್ನು ನಿರ್ನಾಮದೆಡೆಗೆ ಕೊಂಡೊಯ್ಯುವ ಮಾದಕ ವಸ್ತುಗಳಿದ್ದಂತೆ.
ನಮ್ಮ ಮಾನಸಿಕ, ಆಧ್ಯಾತ್ಮಿಕ ವೈರಿ ಮಾನುಷ ಗುಣದವನನ್ನು ಹೆಸರಿಲ್ಲದಂತೆ ಅಳಿಸಲು, ಇವುಗಳನ್ನು ತಿಳಿಯಾದ ಮನಸ್ಸಿನ್ನೊಳಗೆ ಅಘಾತಕಾರಿ ವಿಷಜಂತುವಾಗಿ ಉಲ್ಬಣಗೊಳ್ಳಲು ಬಿಡುತ್ತಾನೆ.
ಆರಂಭದಲ್ಲಿ ಸರಾಗವಾಗಿ ಸ್ವೀಕರಿಸುವ ವ್ಯಕ್ತಿ, ತನ್ನನ್ನು ತಾನು ಕಾಪಾಡಿಕೊಳ್ಳುತ್ತೇನೆ ಎಂಬ ಪೊಳ್ಳು ಭರವಸೆಯಲ್ಲಿ ಇರುತ್ತಾನೆ. ಆದರು ಅನುಮಾನಪಡುತ್ತಲೇ ಒಳಗೊಳಗೆ ಮುದುಡುತ್ತಾನೆ.
ಕ್ರಮೇಣ ವ್ಯಾಪಿಸತೊಡಗುವಾಗ ಇಂದಲ್ಲ ನಾಳೆ ತನ್ನಿಂದ ಅದು ತೊಲಗುತ್ತದೆ ಎಂದುಕೊಂಡರೂ, ಒಳಗೊಳಗೆ ಅಳುಕುತ್ತಾನೆ. ಮುಂದೆ ಒಂದು ದಿನ ಸಂಪೂರ್ಣವಾಗಿ ಆವರಿಸುವಾಗ ಕಳವಳ ಪಡುತ್ತಾನೆ.
ಅಳು, ನಿರಾಶೆ, ಅಪನಂಬಿಕೆ, ಮರೆವು, ಶೂನ್ಯತೆ, ಸಾವಿನ ಚಿಂತೆಗಳು ಅವನಲ್ಲಿ ಅಸ್ತಿತ್ವವನ್ನು ಪಡೆಯತೊಡಗುತ್ತವೆ.
* ಇದರಿಂದ ಅನೇಕರು ತಮ್ಮನ್ನೆ ತಾವು ಕಳೆದುಕೊಂಡು ಪ್ರಾಪಂಚಿಕತೆಯನ್ನು ಮರೆಯಬಹುದು.
* ಅನೇಕ ಪ್ರತಿಭಾನ್ವಿತರು ಆಸಕ್ತಿ ಕಳೆದುಕೊಂಡು ಮೌನಿ ಆಗಬಹುದು.
* ಇನ್ನೂ ಅನೇಕರು ತಮ್ಮನ್ನೇ ಈ ಲೋಕದಿಂದ ಬೇರ್ಪಡಿಸಿಕೊಳ್ಳಲು ತವಕಿಸಿ ಸೋಲಬಹುದು ಅಥವಾ ಇಲ್ಲವಾಗಿಸಿಕೊಳ್ಳಬಹುದು.
ಇವುಗಳಿಗೆಲ್ಲ ಕಾರಣ ವೈರಿ ಬೀಸುವ ಋಣಾತ್ಮಕ ಬಲೆಯೊಳಗೆ ಅರಿವಿಲ್ಲದೆ ತಮ್ಮನ್ನೇ ಬಲಿಯಾಗಿಸಿಕೊಳ್ಳುವುದು!
ಪುಣ್ಯ ಪುರುಷರು, ಸಾಧಕರು, ಮೇಧಾವಿಗಳು, ಬುದ್ದಿವಂತ ಸುಗುಣರುಗಳಂತಹ ಯಾರನ್ನೂ ಇವು ಬಿಟ್ಟಿಲ್ಲ. ಇವುಗಳನ್ನು ಜಯಿಸಿದರೆ ಮಾತ್ರವೇ ಯಶಸ್ಸು, ನೆಮ್ಮದಿ ನಮಗೆ ಕಟ್ಟಿಟ್ಟ ಬುತ್ತಿ.
ಆದ್ದರಿಂದ ಕಣ್ಣು ಮಂಜಾಗುವುದರ ಮುನ್ನ,
ಕಿವಿ ಮಂದವಾಗುವ ಮುನ್ನ,
ಶರೀರ ಚೈತನ್ಯಹೀನವಾಗುವುದರ ಮುನ್ನ,
ಜ್ಞಾನ ಕದಡಿ ಹೋಗುವ ಮುನ್ನ, ಅಭಿಮಾನ ಕಳೆದೋಗುವ ಮುನ್ನ ನಮ್ಮೊಳಗಿನ ದೃಢತೆ ಕುಂದಿ ಹೋಗುವ ಮುನ್ನ ಕೆಲ ನಿಮಿಷಗಳನ್ನಾದರೂ ನಮ್ಮನ್ನು ನಾವು ಪ್ರಸ್ತುತದಲ್ಲಿ ಅವಲೋಕಿಸಬೇಕು.
ಇಲ್ಲದಿದ್ದರೆ ನಿರಾಶೆ ನಮ್ಮನ್ನು ಬಂಧಿಸಿ ನಿರ್ನಾಮಗೊಳಿಸಬಹುದು!
ವೈದ್ಯಕೀಯದಲ್ಲಿ ಆಂತರ್ಯದ ಬೆಂಬಲವನ್ನು ಪ್ರಥಮವಾಗಿ ಪರೀಕ್ಷಿಸುತ್ತಾರೆ. ಅದು ಇದ್ದರೆ ರೋಗಿಯ ಅರ್ಧ ಕಾಯಿಲೆ ಗುಣವಾದಂತೆಯೇ ಸರಿ. ಇದಕ್ಕಾಗಿಯೇ ರೋಗಿ ಸ್ಪಂದಿಸುತ್ತಿದ್ದಾನೆ ಎಂದು ಹೇಳುವುದು.
ಹಾಗೆಯೆ ನಮ್ಮ ಮೇಲೆ ನಕರಾತ್ಮಕ ತಲ್ಲಣಗಳು ಕಾಣಿಸಿಕೊಳ್ಳುತ್ತಿವೆ ಎಂಬ ಅರಿವು ಮೂಡುವಾಗಲೇ ಎಚ್ಚರವಹಿಸಬೇಕು.
ಕೆಲವೊಮ್ಮೆ ನಮಗರಿವಿಲ್ಲದಿದ್ದರು ಇತರರು ಗುರುತಿಸಿರುತ್ತಾರೆ. ಅವರು ಪ್ರಸ್ತಾಪ ಮಾಡಿಯೇ ಮಾಡುತ್ತಾರೆ. ಅದನ್ನು ಉದಾಸೀನ ಮಾಡದೆ ಅದರಿಂದ ಬಿಡಿಸಿಕೊಳ್ಳುವ ಮಾರ್ಗ ಹುಡುಕಬೇಕು.
ಹೆದರಬೇಕಾದ ಪ್ರಸಂಗವಿಲ್ಲ. ಎಲ್ಲಾ ಸಂಕಷ್ಟಗಳಿಗೂ ಪರಿಹಾರ ಇದ್ದೇಇದೆ. ಇದು ಪ್ರಕೃತಿ ನಿಯಮ.
ಇದು ದೇವರ ನಿಯಮ. ದೈವಿಕತೆ ಎಂಬುದು ಅಗೋಚರ ಶಕ್ತಿ. ವಿಶ್ವಾಸ ಇರಬೇಕು.
ಯಾವುದೇ ಕಾರಣಕ್ಕೂ ನಿರಾಶೆಗೆ ಒಳಗಾಗಬಾರದು. ಸ್ವಾಭಿಮಾನ, ಅಹಂ, ತಮಗೆ ಕುಂದು ಬರಬಹುದೆಂಬ ಚಿಂತೆ, ಹಠ, ಅತಿಯಾದ ಕರ್ತವ್ಯ ಪ್ರಜ್ಞೆಗಳಂತವುಗಳನ್ನು ತೊರೆದು ನಮ್ಮನ್ನು ನಾವು ಉಳಿಸಿಕೊಳ್ಳಲು ಅಗೋಚರ ದೇವಬಲದಲ್ಲಿ, ನಮ್ಮೊಳಗಿನ ಅಂತರಾಳದ ಸಹವಾಸದಲ್ಲಿ ವಿಶ್ವಾಸವಿಡಬೇಕು.
ಮುಖ್ಯವಾಗಿ ನಮಗೆ ದೊರಕುವ ಸಮಯವನ್ನು ಶೂನ್ಯತೆಯಲ್ಲಿ ಹರಿದಾಡಲು ಬಿಡಬಾರದು!!
ಏಕೆಂದರೆ ನಾವಿದ್ದರೇನೆ ಈ ಪ್ರಪಂಚ!!!]


- ರಾಬರ್ಟ್ ಕವನ್ರಾಗ್, ಮೈಸೂರು. -

ಗುರುವಾರ, ಜುಲೈ 30, 2020

universalzhone : Music






'ಸಮಯದ ಕೊರತೆ ಎಂದಿಗೂ ಇರದು'

ಸ್ವಾಭಾವಿಕ ಕಾಲದ ತಾಳದಲ್ಲಿನ ಗತಿಯ ಲಯದಲ್ಲಿ ಎಲ್ಲರೂ ಎಲ್ಲವೂ ಹೆಜ್ಜೆ ಹಾಕಲೇಬೇಕು.

ಪ್ರತಿಕ್ಷಣಗಳ ನಾಡಿಮಿಡಿತಗಳಲ್ಲಿ ಏರುಪೇರಾದರೂ ಅದರ ಗತಿಯು ನಿರ್ಣಾಯಕ ಎಂಬುದು ಹೃದಯಬಡಿತ ತನ್ನ ನಾದವನ್ನು ಮೌನವಾಗಿಸಿಕೊಂಡಾಗಲೇ ತಿಳಿವಾಗುವುದು.

ಅಷ್ಟರವರೆಗೇ ತನ್ನಿಂದಲೇ ಎಲ್ಲವು, ತನಗಾಗಿಯೇ ಎಲ್ಲವೂ ಎನ್ನುತ್ತಾ ತನ್ನ ಹಿಡಿತದಲ್ಲಿ ಎಲ್ಲವನೂ ಅವಿತ್ತಿಟ್ಟುಕೊಳ್ಳುವ ಪ್ರಯತ್ನದಲ್ಲಿ ಆ ನಿಮಿಷ ಸೋಲನ್ನು ಅನುಭವಿಸುತ್ತಾನೆ.
ಯಾರನ್ನು ತನ್ನ ಪ್ರಾಣ ಎಂದುಕೊಂಡು ಸದಾ ಅಪ್ಪಿಕೊಂಡಿದ್ದರೋ ಆ ಪ್ರಾಣ ಪಕ್ಷಿ ವಿರೂಪಗೊಳ್ಳಲು ತೊಡಗುವಾಗ ಪಂಚೇಂದ್ರಿಯಗಳು ಮೆಲ್ಲಮೆಲ್ಲನೆ ವಿರುದ್ಧಾತ್ಕಕವಾಗಿ ಕಾರ್ಯವೆಸಗಲು ಹವಣಿಸುತ್ತದೆ. ಅಲ್ಲಿಯವರೆಗೆ ಕಳೆದ ಸಮಯಗಳೆಲ್ಲವೂ ವ್ಯರ್ಥವೆಂದೆನಿಸಿ ಘಟಿಸಿದ್ದೆಲ್ಲವು ಗೊಬ್ಬರವಾಗುವ ಕ್ರಿಯೆಯಂತೆ ಅನುಭವದಿಂದ ಉಂಟಾದ ಅನುತಾಪವೆಲ್ಲವೂ ನೆನಪೆಂಬ ಬುಟ್ಟಿಯಲ್ಲಿ ಬೀಳುತ್ತವೆ.
ನಿದ್ದೆಗೆಟ್ಟು, ಬಣ್ಣಗೆಟ್ಟು, ಅಳತೆ ಮೀರಿ, ಎದೆಯುಬ್ಬಿಸಿ, ಕಣ್ಣರಳಿಸಿ, ಬಯಸಿಬಯಸಿ ಮಾಡಿದ್ದೆಲ್ಲವೂ, ಮಾಡಿಟ್ಟಿದ್ದೆಲ್ಲವೂ ಅಲ್ಲಿಗಲ್ಲೆ ತಲೆತಗ್ಗಿಸಿ ನಿಂತುಬಿಡುತ್ತವೆ.
ತುಂಬಿಸಿಟ್ಟ ಗಾಡಿಯನ್ನೆಳೆಯಲು ಸಾಕಿದ ಸಂಗಾತಿ, ಕುಡಿಗಳೇ ಓಗೊಡದೆ ಸರಿದುಬಿಡುತ್ತಾರೆ.
ಹೀಗಿರುವಾಗ ಸಮಯವನ್ನು ಒತ್ತಡದಿಂದ ಹೊದೆಯುವುದರಿಂದ ಪ್ರಯೋಜನವೇನು?
ತಮಗೂ ಸುಖನೆಮ್ಮದಿಯಿಲ್ಲದೆ, ತಮ್ಮೊಂದಿರುವವರಿಗೂ ನಗುಮುಖ ತೋರಿಸದೆ ಪರಿತಪಿಸಿ ಬದುಕುವ ನೀತಿಯೇಕೆ?
ವ್ಯರ್ಥ ಎಲ್ಲವೂ ವ್ಯರ್ಥವೆಂಬ ಅಂತಿಮ ಕೊರಗಿನಿಂದ ಕೊನೆಯಾಗುವುದೇಕೆ?
ದುಡಿಯುವುದರೊಂದಿಗೆ ದಣಿದ ಮನಕೆ ಮಧುರವಾಗಿರಬೇಕು.
ಪ್ರಾಮಾಣಿಕತೆಯೊಂದಿಗೆ ಪ್ರೀತಿಯ ಅಪ್ಪುಗೆಗೆ ಪರಿಪೂರ್ಣವಾಗಿರಬೇಕು.
ದೊರೆತ ಸಮಯದಲ್ಲಿ ದೊರೆಯಂತೆ ಅಲ್ಲದಿದ್ದರೂ ದೂರಿಲ್ಲದೆ, ದೂರದೆ ಉಸಿರನ್ನು ಉಸಿರಾಗಿಸಿಕೊಂಡು ಉಳಿಯಬೇಕು.
ದೇವರು-ಧರೆಯ ಒಡನಾಟದೊಂದಿಗೆ ನಿರಾಳತೆಯಿಂದ ಸಮಯವನ್ನು ಸಮಾನತೆಯಲ್ಲಿ ಸಂಯೋಜಿಸಿಕೊಳ್ಳಬೇಕು.
ಆಗ ಸಮಯ ಕಾಡಿಸುವುದಿಲ್ಲ.
ಕಾನನದಲ್ಲಿ ಕಾಣದ ಅನುಭವಗಳಲ್ಲಿ ನವಿರೇಳಿಸಿಕೊಂಡು, ಭಯವನ್ನೂ ರೋಮಾಂಚನವಾಗಿ ಪರಿವರ್ತಿಸಿಕೊಂಡು ಗುರಿಯೆಡೆಗೆ ಗುರುತ್ತಿಲ್ಲದಂತೆ ನೆಮ್ಮದಿಯಿಂದ ಹೆಜ್ಜೆ ಇಡಬಹುದು.
ಆ ನೆಮ್ಮದಿಯೊಂದಿಗೆ ಹೊರಟ ಬಾಳ ನೌಕೆಯು ಎಂತಹ ಬಿರುಗಾಳಿಯನ್ನು ಎದುರಿಸುವ ಧ್ಯೆರ್ಯದೆಡೆ ಧಾವಿಸ ತೊಡಗುತ್ತದೆ.
ಆಗ ಮನಸ್ಸೆಂಬ ಮಿಂಚಿನ ನೋಟದಲ್ಲಿ ಕೇವಲ ದಡ ಸೇರುವ ಸಂತೃಪ್ತಿಯ ಭಾವಕ್ಕೆ ಮಾತ್ರ ಸ್ಥಳವಿರುತ್ತದೆ. ಸಮಯವು ಸಾಧಾನೆಗೆ ಮೀಸಲಾಗಿರುವಾಗ ಸಮಯದ ಅಭಾವವು ಗೋಚರಿಸುವುದಿಲ್ಲ.
ಏಕೆಂದರೆ ಪ್ರತಿಯೊಂದು ಕ್ಷಣಗಳೂ ಸಹ ತನ್ನನ್ನು ಕಳೆದುಕೊಳ್ಳುವುದಿಲ್ಲ.
ಯಾವಾಗ ಮುನ್ನೋಟದಲ್ಲಿ ಆತಂಕ ಅನುಮಾನಗಳು ಕಾಣಿಸಿ ಮನಸ್ಸು ಚಂಚಲವಾಗುತ್ತದೋ ಆಗ ಸಮಯಗಳು ಭಾರವಾಗುತ್ತವೆ.
ಯಾವಾಗ ಹೃದಯದಲ್ಲಿ ನಿರಾಶೆಯ ಅಪನಂಬಿಕೆಯ ಮಾಧರಿಗಳು ರೂಪುಗೊಳ್ಳುತ್ತವೋ ಸಂಬಂಧಗಳೆಲ್ಲವೂ ದೂರ ಸರಿದಂತಾಗಿ ನಿಖರತೆಯಿಲ್ಲದೆ ನಿರ್ನಾಮದ ಚಿಂತೆಗಳು ಆವರಿಸಿಕೊಳ್ಳುತ್ತವೆ.
ಆಗ ಮುಂದಡಿಯಿಡಲಾರದ ಹೆಜ್ಜೆಗಳು ಅಲ್ಲೇ ಕುಸಿದು ಬಿಡುವ ಆಲೋಚನೆಗಳಿಗೆ ನಾಂದಿಯಾಡುತ್ತವೆ. ಕಾಲವು ಭೀಕರವಾಗಿ ಕಣ್ಣುಗಳು ಕತ್ತಲೆಯತ್ತ ಧಾವಿಸುತ್ತಲು ತವಕಿಸುತ್ತವೆ. ಕ್ಷಣಗಳು ಗಂಟೆಗಳಾಗಿ, ಗಂಟೆಗಳು ವಾರಗಳಾಗಿ, ವಾರಗಳು ವರ್ಷಗಳಂತೆ ಮೇಲೆರುವಂತೆ ಭಾಸವಾದಾಗ ಬದುಕು ಅರ್ಥವನ್ನು ಕಳೆದುಕೊಳ್ಳತೊಡಗುತ್ತವೆ. ಅದ್ದರಿಂದ ನೋಟ, ಮನಸ್ಸು, ಹೃದಯ, ಹೆಜ್ಜೆಗಳಲ್ಲಿ ದೃಢತೆ, ನಂಬಿಕೆ, ವಿಶ್ವಾಸ ಬೆರೆತಾಗ ಸಮಯವು ಸಾಲದಾಗುತ್ತವೆ.
ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡಾಗ ಸಮಯದ ಕೊರತೆಯೂ ಕಾಣದಾಗುತ್ತವೆ.
ಸಮಯವೂ ಸಹ ನಮ್ಮ ಜೊತೆ ಸಾಗುತ್ತದೆ.


ಶನಿವಾರ, ಜುಲೈ 4, 2020

*ಏಕಾಂತವೆಂಬ ಕಾಂತಿ ಹೀನತೆ*



ಪ್ರಾಣಿಪಕ್ಷಿ, ಕ್ರಿಮಿಕೀಟ, ಜಲಚರ, ಭೂಚರ ... ಸಮಸ್ತ ಜೀವಿಗಳು ಕೆಲವು ದೈಹಿಕ ಸ್ಥಿತಿಗತಿಯಲ್ಲಿ ಕೆಲ ಸಮಯ ಏಕಾಂತ ಅಗತ್ಯವಿದ್ದರೂ, ಒಂಟಿತನ ಇರುವುದಿಲ್ಲ.
ಪ್ರಾಕೃತಿಕ ಸಮಸ್ಥಿತಿಯನ್ನು ಕಾಪಾಡಿಕೊಳ್ಳಲು ಪ್ರತಿಯೊಂದು ಜೀವಿಗಳಲ್ಲಿಯೂ ಕ್ರಮಬದ್ದವಾದ ನಡುವಳಿಕೆ ಇರುತ್ತದೆ. ಕೂಡುವುದು, ಕಳೆಯುವುದು, ಬೆಳೆಯುವುದು, ಬೆಳೆಸುವುದು, ಕಟ್ಟುವುದು, ಹುಡುಕುವುದು, ಕೂಡಿಡುವುದು, ವಿರಮಿಸುವುದು... ಹೀಗೆ ತಮ್ಮನ್ನು ನಿಶ್ಚಿತ ತಹಬದಿಯಲ್ಲಿ ಯಾವುದೇ ಜಂಜಾಟವಿಲ್ಲದೆ ಕೊನೆಯವರೆಗೆ ಮುಂದುವರೆಸುತ್ತವೆ. 
ಉಳಿವಿಗಾಗಿ ಕೆಲವೊಮ್ಮೆ ಕಾದಾಡುತ್ತವೆ.
ಆದರೆ ಮಾನವ ಎಂಬ ಪ್ರಾಣಿ ನವ ಮಾಪಕದತ್ತ ದೃಷ್ಟಿನೆಟ್ಟು ಇತರ ನಡುವಳಿಕೆಗಳ ಕಡೆ ಗಮನ ನೀಡುವುದಕ್ಕಿಂತಲೂ ಹೆಚ್ಚಾಗಿ ತನ್ನುಳಿವಿಗಾಗಿ ಕೊನೆಯುಸಿರಿರುವರೆಗೂ ಕಾದಾಡುತ್ತಲೇ ಇರುತ್ತಾನೆ.
ನಾಗರಿಕತೆಯ ನೌಕೆಯಲ್ಲಿ ಪಯಣಿಸುವ ಮನುಜ, ಸೃಷ್ಟಿಯೊಳಗೇ ಇದ್ದು ಅದನ್ನು ಅವಲಂಬಿಸಿದ್ದರೂ ತಾನು ತನ್ನಿಂದಲೇ ತನ್ನುಳಿವು ಎಂಬಂತೆ ಕಾಲದೂಡುತ್ತಾನೆ.
ಆಚಾರವಿಚಾರ, ಜಾತಿಧರ್ಮ, ಕಾನೂನು ಕಟ್ಟಳೆಗಳ ಹೆಸರಿನಲ್ಲಿ ತನ್ನನ್ನು ತಾನೇ ಬಂಧಿಸಿಕೊಳ್ಳುತ್ತಾನೆ. ಕೊಸರಿಕೊಂಡು ಕೊರಗುತ್ತಾನೆ.
ಸಂಗಮ, ಸಂಯಮ, ಸಂಧಾನ, ಸಂಸಾರ, ಸಂಚಾರಗಳಲ್ಲಿ ಸರಿಗಟ್ಟಲಾರದೆ ಸಹನೆಗಳಲ್ಲಿ ಸೋಲುತ್ತಾನೆ. 
ತನ್ನಿಚ್ಛೆಗಳನ್ನು ಪೂರೈಸಿಕೊಳ್ಳಲಾಗದೆ, ಸರಿಸಿಡಲೂ ಆಗದೆ ತಳಮಳದಿಂದ ಮನಸಾಕ್ಷಿಗೆ ವಿರೋಧವಾಗಿ ನಡೆಯುತ್ತಾನೆ.
ಯಾವ ವಿಚಾರಗಳು‌ ತನ್ನ ಹದ್ದುಬಸ್ತಿಗಾಗಿ‌ ರೂಪಿಸಿಕೊಂಡನೋ ಅದೇ ಆತನ ಒಂಟಿತನಕ್ಕೆ ಕಾರಣವಾಗುವಾಗ ಮುದುಡುತ್ತಾನೆ. 
ದೇಹದ ಬಯಕೆ, ಮನಸ್ಸಿನ ಬಯಕೆಗಳನ್ನು ಸರಿದೂಗಿಸಲಾಗದೆ ನೀತಿನಿಯಮಗಳಿಗೆ ವಿರುದ್ಧ ದಿಕ್ಕನ್ನು ತೋರಿಸುತ್ತಾನೆ. ಸ್ವಾಭಿಮಾನ, ಅಹಂ, ಅನಾಸಕ್ತಿ, ಪಂಚೇಂದ್ರಿಯಗಳ ಬಯಕೆ, ಅತಿಯಾಸೆಗಳಿಂದ ಅನೇಕರು ಸಮಾಜದಲ್ಲಿ ಎದ್ದು ಕಾಣುತ್ತಾರೆ.
ತನಗೆ ಬೆಂಬಲವಿಲ್ಲ, ಯಾರೂ ಪ್ರೀತಿಸುತ್ತಿಲ್ಲ, ಜೊತೆಗಾರರಿಲ್ಲ, ತನ್ನಾಸೆಗೆ ಸಹಕರಿಸುವವರಿಲ್ಲ, ಪ್ರತಿಭೆಗಳಿಗೆ ಉತ್ತೇಜನ ಸಿಗುತ್ತಿಲ್ಲವೆಂಬಿತ್ಯಾದಿಗಳಿಂದ ಕೊರಗುತ್ತಾರೆ. 
ತಾನು ನಿರ್ಲಕ್ಷಕ್ಕೆ ಒಳಗಾಗಿದ್ದೇನೆ ಎಂಬ ಚಿಂತೆಯಲ್ಲಿ ಸೊರಗುತ್ತಾರೆ.
ಮಹಿಳೆಯರಲ್ಲಿ‌ ಏಕಾಂಗಿ ಭಾವನೆ ಕಾಡಿಸುವುದೇ ಹೆಚ್ಚು. 
ಗಂಡ ತನ್ನನ್ನು ನಿರಾಕರಿಸುತ್ತಿದ್ದಾನೆ ಎಂಬ ಚಿಂತೆ ಅನೇಕರಿಗಿದೆ. 
ವಿಧವೆಯಾದರಂತೂ ಸಮಾಜ ಅವರನ್ನೂ ಬೇರೆ ವಿಧದಲ್ಲಿಯೇ ನೋಡುತ್ತದೆ. 
ಹೆತ್ತವರಿಲ್ಲದೆ ಮಕ್ಕಳು, ಮುದಿ ವಯಸ್ಸಿನಲ್ಲಿ ಹೆತ್ತವರು ಒಂಟಿತನದಿಂದ ದುಃಖಿಸುತ್ತಾರೆ. 
ಒಂಟಿತನ ಒಂದಿಲ್ಲೊಂದು ಬಾರಿ ಎಲ್ಲರನ್ನೂ ಕಾಡಿರುತ್ತದೆ. 
ಕೆಲವರು ಅದಕ್ಕೆ ಸೋತೆಬಿಟ್ಟಿರುತ್ತಾರೆ.
ಏಕಾಂತ ಕಾಡಿಸದಿರಲು,
* ಒಂಟಿತನವನ್ನು ತೊರೆಯುವ ಅನೇಕ ಮಾರ್ಗಗಳಿವೆ. ಅವುಗಳನ್ನು ಪಾಲಿಸಬೇಕು
* ಸದಾ ಕಾರ್ಯಪ್ರವೃತ್ತರಾಗಲು ಪ್ರಯತ್ನಿಸಬೇಕು.
* ಕಾಡಿಸುವ ಒಂಟಿತನದ ವಿಚಾರಗಳನ್ನು ನೆನಪಿಸಿಕೊಳ್ಳಬಾರದು.
* ಸ್ನೇಹ, ಉತ್ತಮ ಸಂಬಂಧಗಳನ್ನು ರೂಪಿಸಿಕೊಳ್ಳಬೇಕು.
* ಧ್ಯಾನ, ಆತ್ಮಸ್ಥೈರ್ಯಗಳನ್ನು ರೂಢಿಸಿಕೊಳ್ಳಬೇಕು.
* ಸಾವಧಾನವಾಗಿ ಚಿಂತಿಸಿ ಸೂಕ್ತ ಪರಿಹಾರವನ್ನು ಯಾವುದೇ ಸಂಕೋಚವಿಲ್ಲದೆ ಕಂಡುಕೊಳ್ಳಬೇಕು.
* ಒಂಟಿ ಎನ್ನುವ ಕನಿಕರ, ಕರುಣಾ ನೋಟಕ್ಕಾಗಿ ತವಕಿಸದೆ ಮನದಾಳದಲ್ಲಿ ನಾನು ಒಂಟಿಯಲ್ಲ ಎಂಬ ದೃಢತೆಗೆ ಪ್ರಯತ್ನಿಸಬೇಕು.
* ಒಂಟಿತನವನ್ನು ಒಂಟಿತನದಿಂದಲೇ ಗೆಲ್ಲಬೇಕು.!!!







ಬುಧವಾರ, ಜೂನ್ 24, 2020

'ಶಿಕ್ಷೆಯ ಮೂಲಕ ರಕ್ಷೆಯ ಜಯ?!'



ಶಿಕ್ಷಣವಿಲ್ಲದ ಊರಿಲ್ಲ, ಶಿಕ್ಷಕರಿಲ್ಲದೆ ಶಿಕ್ಷಣವಿಲ್ಲ. ಶಿಕ್ಷೆ ಇಲ್ಲದೆ ಸರಿದಾರಿಗೆ ತರುವ ಬೇರೆ ಮಾರ್ಗವೇ ಇಲ್ಲ!?
+ ದೇವರೂ ಸಹ ಸೂಕ್ತ ಕಾರಣಗಳಿಗಾಗಿ ಭಕ್ತರನ್ನು ಶಿಕ್ಷಿಸುತ್ತಾರೆ.
+ ಹೆತ್ತವರು ಮಕ್ಕಳ ಒಳ್ಳೆಯ ಭವಿಷ್ಯದ ಮುಂದಾಲೋಚನೆಯಿಂದ ಶಿಕ್ಷಿಸುತ್ತಾರೆ.
+ ಶಿಕ್ಷಕರು ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಿಸುತ್ತಾರೆ.
+ ಹಿರಿಯರು ಕಿರಿಯರ ಒಳಿತಿಗಾಗಿ ತಮ್ಮ ಅನುಭವಗಳನ್ನು ತಾಳೆ ಹಾಕುತ್ತ ಶಿಕ್ಷಿಸುವ ಬಗ್ಗೆ ಎಚ್ಚರಿಸುತ್ತಾರೆ.
ಹೀಗೆ ಶಿಕ್ಷೆ ಎಂಬುದು ನಾಗರಿಕತೆಯ ಪರಿಧಿಯಲ್ಲಿ ಮಾತ್ರವಲ್ಲ ಮಾನವ ಅಸ್ಥಿತ್ವವು ಈ ಭೂಲೋಕದಲ್ಲಿ ಬಂದ ಗಳಿಗೆಯಿಂದಲೂ ಇದೆ. 
ಅಷ್ಟೇ ಅಲ್ಲ  ಭೂಕಂಪ, ಚಂಡಮಾರುತ, ಬಿರುಗಾಳಿ, ಜಲಪ್ರಳಯ, ಕಾಡ್ಗಿಚ್ಚು ಹೀಗೆ ಅನೇಕ ಪ್ರಕೃತಿ ವಿಕೋಪಗಳು ಧರೆಯನ್ನು ನಿರ್ನಾಮ ಮಾಡಲು ಅಲ್ಲ. ಮಾನವರನ್ನು ಎಚ್ಚರಿಸಲು ತೋರಿಸುವ ಶಿಕ್ಷೆಗಳಾಗಿವೆ.
ಅಂತೆಯೇ ಶಿಕ್ಷಿಸುವವರು ಶಿಕ್ಷೆಯನ್ನು ನೀಡುವುದು ಇತರರ ಒಳಿತಿಗಾಗಿಯೇ! 
ಶಿಕ್ಷೆಯನ್ನು ಮತ್ತೊಬ್ಬರ ಅಳಿವಿಗಾಗಿ ನೀಡಿದ್ದಾರೆ ಎಂದಾಗ ಅದು ಶಿಕ್ಷೆ ಎನಿಸಿಕೊಳ್ಳದು. ಅದು ದ್ವೇಷ ಎನಿಸಿಕೊಳ್ಳುತ್ತದೆ.
ಆದರೆ ಮೂಢರಾಗಿ ವಿನಾಶದತ್ತ ಪಯಣಿಸುತ್ತಿರುವ ಈ ನಾಗರಿಕ ಸಮಾಜದಲ್ಲಿ ಹಿಡಿತವಿಲ್ಲದೆ ಬಾಳುತ್ತಿರುವ ಮಾನವರು ಶಿಕ್ಷೆಯನ್ನು ಬೇರೆ ರೀತಿಯಲ್ಲಿ ವಿಮರ್ಶೆ ಮಾಡುತ್ತಿದ್ದಾರೆ. 
ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ವಿವಿಧ ಕಾನೂನು ಕ್ರಮಗಳನ್ನು, ರೀತಿನೀತಿಗಳನ್ನು ರೂಪಿಸಿಕೊಂಡು ತಮ್ಮದೇ ಆದಂತಹ ದಾರಿ ಹಿಡಿಯಲು ಅನುಕೂಲಕರ ವಾತಾವರಣಗಳನ್ನು ನಿರ್ಮಿಸಿಕೊಂಡಿದ್ದಾರೆ.
ಹಿಂದೆ ತಮ್ಮ ಮಕ್ಕಳ ಒಳಿತಿಗಾಗಿ ಶಿಕ್ಷೆ ನೀಡಲು, ಶಿಕ್ಷೆ ಕೊಡಿಸಲು ಹಿಂದೇಟು ಹಾಕುತ್ತಿರಲಿಲ್ಲ. ಸಮಾಜದಲ್ಲಿನ ದುಷ್ಟತನ, ದರೋಡೆ,‌ ಮೋಸ, ವಂಚನೆಗಳನ್ನು ತೊಡೆದು ಹಾಕಲು ಅಪರಾಧಗಳಿಗೆ ತಕ್ಕಂತ ಶಿಕ್ಷೆಯನ್ನು ರೂಪಿಸಲಾಗಿದೆ. ಧಾರ್ಮಿಕವಾಗಿಯೂ ಪಾಪಗಳಿಗೆ ಶಿಕ್ಷೆಗಳು ನಿಗಧಿಯಾಗಿವೆ ಎಂದು ತಿಳುವಳಿಕೆ ಬೋಧಿಸಲಾಗುತ್ತದೆ. 
ಇದರಿಂದ ಇಂದಿನ ಸಮಾಜದಲ್ಲಿ ಮಕ್ಕಳು ಮಕ್ಕಳಾಗಿ ಇರಲು, ಮಹಿಳೆಯರು ಮಹಿಳೆಯಾಗಿರಲು ಸೋಲುತ್ತಿದ್ದಾರೆ, ಗಂಡಸರುಗಳ ಮಿತಿಮೀರಿ ನಡತೆಗಳು.... ಶಿಕ್ಷೆಗಳಲ್ಲಿನ ಏರುಪೇರಿನಿಂದಲೇ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ದೊರೆಯುತ್ತವೆ.
ಆದ್ದರಿಂದ ಶಿಕ್ಷೆಗಳು ಶಿಕ್ಷಣಕ್ಕಾಗಿ, ಉತ್ತಮ ಫಲಭರಿತ ಪರಿಣಾಮಕ್ಕಾಗಿ ಎಂಬುದನ್ನು ಅರಿಯಬೇಕು.
ಈ ನಿಟ್ಟಿನಲ್ಲಿ ವೈಯಕ್ತಿಕವಾದ ವಿಚಾರಗಳನ್ನು ಪ್ರಸ್ತಾಪಿಸುವಾಗ ಅನೇಕರು ತಮ್ಮ ಬಾಳಿನಲ್ಲಿ ಸಂಭವಿಸುವ ಘಟನೆಗಳನ್ನು ಶಿಕ್ಷೆಗಳೆಂದು ಪರಿಗಣಿಸುತ್ತಾರೆ. 
ಉದಾಹರಣೆಗೆ ಬಡತನ, ಅಪಘಾತಗಳು, ಅಸಂಭವ ಸನ್ನಿವೇಶಗಳು, ಸಾಂಸರಿಕ ಎಡರುತೊಡರಗಳು, ಬದಲಿಸದಾಗದಂತಹ ಕುಂದುಕೊರತೆಗಳು, ಸಂಬಂಧಗಳನ್ನು ಕಳೆದುಕೊಳ್ಳುವುದು, ಇತರರಿಂದ ತುಳಿತಕ್ಕೊಳಗಾಗುವುದು, ಸಾಂಧರ್ಬಿಕ ಶೋಕಗಳು... ಇತ್ಯಾದಿಗಳು. 
ಇಂತಹ ನೋವಿನಲ್ಲಿ ಸಾಮಾನ್ಯವಾಗಿ ಇವುಗಳೆಲ್ಲವನ್ನೂ ದೇವರು ನೀಡಿರುವ ಶಾಪಗಳೆಂದು ದೂರುತ್ತಾರೆ. 
ಅದರೆ ಯಾವ ವಿಷಯಗಳು ನಮ್ಮನ್ನು ಉತ್ತಮತೆಯತ್ತ ಕೊಂಡೊಯ್ಯಲು ಯಾವುದೇ ರೀತಿಯಲ್ಲಿ ಅನುಕೂಲಕರವಾಗಿ‌ ಇರುವುದಿಲ್ಲವೋ ಖಂಡಿತ ಅವುಗಳು ಶಿಕ್ಷೆಗಳಲ್ಲ! 
ಬದಲಾಗಿ ನಮ್ಮ ಅಜ್ಞಾನದಿಂದಲೋ, ಅಸಡ್ಡೆಯಿಂದಲೋ, ನಿರ್ಲಕ್ಷ್ಯದಿಂದಲೋ, ಇತರರು ನಮ್ಮ ಮೇಲೆ ಹಗೆ ತೀರಿಸಿಕೊಳ್ಳುವುದರಿಂದ ಸಂಭವಿಸುವುದಾಗಿದೆ. 
ಕೆಲವೊಮ್ಮೆ ಶಿಕ್ಷೆಗಳಿಂದ‌ ಯಾವುದೇ ಒಳ್ಳೆಯ ಫಲ ಸಿಗದಿರಬಹುದು. ಅಂದ ಮಾತ್ರಕ್ಕೆ ಅದು‌ ಎಲ್ಲರಲ್ಲೂ ಒಂದೇ ವಿಧವಾಗಿ ಇರಲು ಸಾಧ್ಯವಿಲ್ಲ.
ನಮ್ಮ ಬಯಕೆಗಳಿಂದ ಉಂಟಾಗುವ ದೇವರ ವಿರುದ್ಧ ಮಾಡುವ ಅಪರಾಧಗಳಿಗೆ ಅಂತಿಮ ತೀರ್ಪಿದೆ.
ಆದ್ದರಿಂದಲೇ ಶಿಕ್ಷೆ ಎನ್ನುವುದರ ಬಗ್ಗೆ ಎಚ್ಚರಿಕೆಯಿರಬೇಕು.
- ಪಂಚೇಂದ್ರಿಯ ಬಯಕೆಗಳ ನಿಗ್ರಹ.
- ಮಾನಸಿಕ ವೈಪರೀತ್ಯಗಳ ತಡೆ.
- ಆಧ್ಯಾತ್ಮಿಕ ಕಟ್ಟಳೆ, ಅನುಕರಣೆಗಳಲ್ಲಿ ನಿಖರತೆ.
- ಲೌಕಿಕ ಮತ್ತು ಸ್ವರ್ಗೀಯ ಅಪರಾಧಗಳ ನಡುವಿನ ವ್ಯತ್ಯಾಸಗಳ ತಿಳುವಳಿಕೆ.
- ದೈವ ಪ್ರೀತಿ, ಮಾನವ ಪ್ರೀತಿಗಳ ಸ್ಪಷ್ಟವಾದ ನಿಲುವು.
- ಆಂತರಿಕ, ಬಾಹ್ಯ ಫಲಗಳ ಮೂಲ.
ಇಂತಹವುಗಳನ್ನು ಸೂಕ್ತವಾದ ದೃಷ್ಟಿಕೋನದಲ್ಲಿ ಪರಾಮರ್ಶಿಸಿ ತೀರ್ಮಾನಿಸಿಕೊಳ್ಳಬೇಕು. 
ಉತ್ತಮ ಗುರಿಯತ್ತ ಗಮನವಿಟ್ಟು ಮುಂದಡಿಯಿಡುತ್ತಿರುವವರು ಶಿಕ್ಷೆಗಳನ್ನು, ವೈಯಕ್ತಿಕ ಋಣಾತ್ಮಕ ಚಿಂತೆಗಳನ್ನು‌ ಅದಲುಬದಲು ಅನುಕರಿಸಿದೆಯಾದಲ್ಲಿ ನಿರ್ಧಿಷ್ಟವಾದ ಮುನ್ನೋಟವನ್ನು ಕಳೆದುಕೊಳ್ಳುವ ಸಂಭವವಿದೆ. 
ಏಕೆಂದರೆ ಶಿಕ್ಷೆಯಿಲ್ಲದೆ ರಕ್ಷೆಯ ತೇಜಸ್ಸು ಪ್ರಜ್ವಲಿಸದು‌ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದು ವಿಚತ್ರವಾಗಿ ಕಂಡರೂ ಸಹ ವಿಭಿನ್ನ ಅನುಭವಗಳ ಮೂಲಕ ನಮಗೆ ಸಾಬೀತಾಗುವ ಸಾಧ್ಯತೆ ಇದೆ. ಯೇಸುಪ್ರಭುವಿಗೆ ಶಿಲುಬೆಯ ಮರಣದ ಕ್ರೂರ ಶಿಕ್ಷೆ ದೊರೆತಿದ್ದರಿಂದಲೇ ಮಾನವರ ರಕ್ಷಣೆಯಾಯಿತು. ಮನುಜನ ಬದುಕು‌ ಹೊಸ ಹಾದಿಯನ್ನು ಹಿಡಿಯಿತು.
- ರಾಬರ್ಟ್ ಕವನ್ರಾಗ್, ಮೈಸೂರು -


*ನಿರಾಶೆ ನಿರ್ನಾಮಕ್ಕೆ ಮುನ್ಸೂಚನೆ*

*ನಿರಾಶೆ ನಿರ್ನಾಮಕ್ಕೆ ಮುನ್ಸೂಚನೆ*
ನೋವು, ದುಃಖ, ಸಂಕಟ, ಭಯ, ಕಳವಳ, ಕೊರಗು, ಕೀಳರಿಮೆ, ಕೋಪ, ಒಂಟಿತನ, ಅತೃಪ್ತಿ, ಉದ್ವೇಗ, ವ್ಯಥೆಗಳಂತ ನಿರಾಶೆಗೆ ಸಂಬಂಧಪಟ್ಟ ಅಸ್ವಾಭಾವಿಕ ವರ್ತನೆಗಳು ನಮ್ಮನ್ನು ನಿರ್ನಾಮದೆಡೆಗೆ ಕೊಂಡೊಯ್ಯುವ ಮಾದಕ ವಸ್ತುಗಳಿದ್ದಂತೆ.
ನಮ್ಮ ಮಾನಸಿಕ, ಆಧ್ಯಾತ್ಮಿಕ ವೈರಿಯು ಮಾನುಷ ಗುಣದವನನ್ನು ಹೆಸರಿಲ್ಲದಂತೆ ಅಳಿಸಲು, ಇವುಗಳನ್ನು ತಿಳಿಯಾದ ಮನಸ್ಸಿನ್ನೊಳಗೆ ಅಘಾತಕಾರಿ ವಿಷಜಂತುವಾಗಿ ಉಲ್ಬಣಗೊಳ್ಳಲು ಬಿಡುತ್ತಾನೆ.
ಆರಂಭದಲ್ಲಿ ಸರಾಗವಾಗಿ ಸ್ವೀಕರಿಸುವ ವ್ಯಕ್ತಿ, ತನ್ನನ್ನು ತಾನು ಕಾಪಾಡಿಕೊಳ್ಳುತ್ತೇನೆ ಎಂಬ ಪೊಳ್ಳು ಭರವಸೆಯಲ್ಲಿ ಇರುತ್ತಾನೆ. ಆದರು ಅನುಮಾನಪಡುತ್ತಲೇ ಒಳಗೊಳಗೆ ಮುದುಡುತ್ತಾನೆ.
ಕ್ರಮೇಣ ವ್ಯಾಪಿಸತೊಡಗುವಾಗ ಇಂದಲ್ಲ ನಾಳೆ ತನ್ನಿಂದ ಅದು ತೊಲಗುತ್ತದೆ ಎಂದುಕೊಂಡರೂ, ಒಳಗೊಳಗೆ ಅಳುಕುತ್ತಾನೆ.
ಮುಂದೆ ಒಂದು ದಿನ ಸಂಪೂರ್ಣವಾಗಿ ಆವರಿಸುವಾಗ ಕಳವಳ ಪಡುತ್ತಾನೆ. ಅಳು, ನಿರಾಶೆ, ಅಪನಂಬಿಕೆ, ಮರೆವು, ಶೂನ್ಯತೆ, ಸಾವಿನ ಚಿಂತೆಗಳು ಅವನಲ್ಲಿ ಅಸ್ತಿತ್ವವನ್ನು ಪಡೆಯತೊಡಗುತ್ತವೆ.
ಇದರಿಂದ ಅನೇಕರು ತಮ್ಮನ್ನೆ ತಾವು ಕಳೆದುಕೊಂಡು ಪ್ರಾಪಂಚಿಕತೆಯನ್ನು ಮರೆಯಬಹುದು. ಅನೇಕ ಪ್ರತಿಭಾನ್ವಿತರು ಆಸಕ್ತಿ ಕಳೆದುಕೊಂಡು ಮೌನಿ ಆಗಬಹುದು. ಇನ್ನೂ ಅನೇಕರು ತಮ್ಮನ್ನೇ ಈ ಲೋಕದಿಂದ ಬೇರ್ಪಡಿಸಿಕೊಳ್ಳಲು ತವಕಿಸಿ ಸೋಲಬಹುದು ಅಥವಾ ಇಲ್ಲವಾಗಿಸಿಕೊಳ್ಳಬಹುದು.
ಇವುಗಳಿಗೆಲ್ಲ ಕಾರಣ ವೈರಿ ಬೀಸುವ ಋಣಾತ್ಮಕ ಬಲೆಯೊಳಗೆ ಅರಿವಿಲ್ಲದೆ ತಮ್ಮನ್ನೇ ಬಲಿಯಾಗಿಸಿಕೊಳ್ಳುವುದು!
ಪುಣ್ಯ ಪುರುಷರು, ಸಾಧಕರು, ಮೇಧಾವಿಗಳು, ಬುದ್ದಿವಂತ ಸುಗುಣರುಗಳಂತಹ ಯಾರನ್ನೂ ಇವು ಬಿಟ್ಟಿಲ್ಲ. ಅಷ್ಟೇ ಏಕೆ ನಮ್ಮ ಪ್ರಭುವನ್ನು ಸಹ ಕಾಡಿಸಿತು.
ಇವುಗಳನ್ನು ಜಯಿಸಿದರೆ ಮಾತ್ರವೇ ಯಶಸ್ಸು, ನೆಮ್ಮದಿ ನಮಗೆ ಕಟ್ಟಿಟ್ಟ ಬುತ್ತಿ.
ಆದ್ದರಿಂದ ಕಣ್ಣು ಮಂಜಾಗುವುದರ ಮುನ್ನ, ಕಿವಿ ಮಂದವಾಗುವ ಮುನ್ನ, ಶರೀರ ಚೈತನ್ಯಹೀನವಾಗುವುದರ ಮುನ್ನ, ಜ್ಞಾನ ಕದಡಿ ಹೋಗುವ ಮುನ್ನ, ಅಭಿಮಾನ ಕಳೆದೋಗುವ ಮುನ್ನ, ನಮ್ಮೊಳಗಿನ ದೃಢತೆ ಕುಂದಿ ಹೋಗುವ ಮುನ್ನ ಕೆಲ ನಿಮಿಷಗಳನ್ನಾದರೂ ನಮ್ಮನ್ನು ನಾವು ಪ್ರಸ್ತುತದಲ್ಲಿ ಅವಲೋಕಿಸಬೇಕು.
ಇಲ್ಲದಿದ್ದರೆ ನಿರಾಶೆ ನಮ್ಮನ್ನು ಬಂಧಿಸಿ ನಿರ್ನಾಮಗೊಳಿಸಬಹುದು! ವೈದ್ಯಕೀಯದಲ್ಲಿ ಆಂತರ್ಯದ ಬೆಂಬಲವನ್ನು ಪ್ರಥಮವಾಗಿ ಪರೀಕ್ಷಿಸುತ್ತಾರೆ.
ಅದು ಇದ್ದರೆ ರೋಗಿಯ ಅರ್ಧ ಕಾಯಿಲೆ ಗುಣವಾದಂತೆಯೇ ಸರಿ. ಇದಕ್ಕಾಗಿಯೇ ರೋಗಿ ಸ್ಪಂದಿಸುತ್ತಿದ್ದಾನೆ ಎಂದು ಹೇಳುವುದು.
ಹಾಗೆಯೆ ನಮ್ಮ ಮೇಲೆ ನಕರಾತ್ಮಕ ತಲ್ಲಣಗಳು ಕಾಣಿಸಿಕೊಳ್ಳುತ್ತಿವೆ ಎಂಬ ಅರಿವು ಮೂಡುವಾಗಲೇ ಎಚ್ಚರವಹಿಸಬೇಕು. ಕೆಲವೊಮ್ಮೆ ನಮಗರಿವಿಲ್ಲದಿದ್ದರು ಇತರರು ಗುರುತಿಸಿರುತ್ತಾರೆ. ಅವರು ಪ್ರಸ್ತಾಪ ಮಾಡಿಯೇ ಮಾಡುತ್ತಾರೆ. ಅದನ್ನು ಉದಾಸೀನ ಮಾಡದೆ ಅದರಿಂದ ಬಿಡಿಸಿಕೊಳ್ಳುವ ಮಾರ್ಗ ಹುಡುಕಬೇಕು.
ಹೆದರಬೇಕಾದ ಪ್ರಸಂಗವಿಲ್ಲ. ಎಲ್ಲಾ ಸಂಕಷ್ಟಗಳಿಗೂ ಪರಿಹಾರ ಇದ್ದೇಇದೆ. ಇದು ಪ್ರಕೃತಿ ನಿಯಮ.
ಎಲ್ಲರಿಗೂ ಒಬ್ಬರು ಸಂಗಾತಿ ಇದ್ದೇ ಇರುತ್ತಾರೆ. ಇದು ದೇವರ ನಿಯಮ.
ದೈವಿಕತೆ ಎಂಬುದು ಅಗೋಚರ ಶಕ್ತಿ. ವಿಶ್ವಾಸ ಇರಬೇಕು. ಯಾವುದೇ ಕಾರಣಕ್ಕೂ ನಿರಾಶೆಗೆ ಒಳಗಾಗಬಾರದು.
ಸ್ವಾಭಿಮಾನ, ಅಹಂ, ತಮಗೆ ಕುಂದು ಬರಬಹುದೆಂಬ ಚಿಂತೆ, ಹಠ, ಅತಿಯಾದ ಕರ್ತವ್ಯ ಪ್ರಜ್ಞೆಗಳಂತವುಗಳನ್ನು ತೊರೆದು ನಮ್ಮನ್ನು ನಾವು ಉಳಿಸಿಕೊಳ್ಳಲು ಅಗೋಚರ ದೇವಬಲದಲ್ಲಿ, ನಮ್ಮೊಳಗಿನ ಅಂತರಾಳದ ಸಹವಾಸದಲ್ಲಿ ವಿಶ್ವಾಸವಿಡಬೇಕು. ಮುಖ್ಯವಾಗಿ, ನಮಗೆ ದೊರಕುವ ಸಮಯವನ್ನು ಶೂನ್ಯತೆಯಲ್ಲಿ ಹರಿದಾಡಲು ಬಿಡಬಾರದು!! ಏಕೆಂದರೆ ನಾವಿದ್ದರೇನೆ ಈ ಪ್ರಪಂಚ!!!

- ರಾಬರ್ಟ್ ಕವನ್ರಾಗ್ - 

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...